Advertisement

ನೂರಾರು ಎಕರೆ ಪ್ರದೇಶ ಬೆಳೆ ಹಾನಿ

01:48 PM Apr 08, 2020 | Naveen |

ಮುಂಡರಗಿ: ತಾಲೂಕಿನಲ್ಲಿ ರವಿವಾರ ರಾತ್ರಿ ಬೀಸಿದ ಗಾಳಿ, ಮಳೆಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ನೆಲಕ್ಕೆ ಉರುಳಿದೆ. ಇದರಿಂದಾಗಿ ಭತ್ತ ಬೆಳೆದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಭತ್ತದ ಬೆಳೆ ನೆಲಕ್ಕೆ ಉರುಳಿರುವುದರಿಂದಾಗಿ ಭತ್ತದ ಇಳುವರಿ ಕುಂಠಿತಗೊಳ್ಳುವ ಆತಂಕದಲ್ಲಿ ರೈತರು ಇದ್ದಾರೆ.

Advertisement

ಇದರಿಂದ ಭತ್ತದ ಬೆಳೆಯಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರು ನಷ್ಟ ಅನುಭವಿಸುವಂತಾಗಿದೆ. ತಾಲೂಕಿನ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ 400 ಎಕರೆ, ಹಮ್ಮಿಗಿಯಲ್ಲಿ 500 ಎಕರೆ, ಶಿಂಗಟಾಲೂರಿನಲ್ಲಿ 800 ಎಕರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಭತ್ತದ ಬೆಳೆ ನೆಲಕ್ಕುರುಳಿದೆ. ಇದರಿಂದಾಗಿ ಭತ್ತದ ಬೆಳೆಯಲ್ಲಿ ಶೇ.75ರಷ್ಟು ಇಳುವರಿಯಲ್ಲಿ ಹಾನಿ ಉಂಟಾಗಲಿದೆ. ಭತ್ತದ ಬೆಳೆಯಲ್ಲಿ ಬರೀ ರೈತರಿಗೆ ಶೇ. 25ರಷ್ಟು ಮಾತ್ರ ಇಳುವರಿ ಬರಲಿದ್ದು, ಇದರಿಂದ ಭತ್ತ ಬೆಳೆ ರೈತರು ನಷ್ಟ ಅನುಭವಿಸುವಂತೆ ಆಗಿದೆ.

ನಮ್ಮ ಗದ್ದೆಯಲ್ಲಿ ಬೆಳೆದ ಭತ್ತ ಮಳೆ ಗಾಳಿಯಿಂದ ನೆಲಕ್ಕುರುಳಿದೆ. ನಲವತ್ತು ಎಕರೇ ಪ್ರದೇಶದಲ್ಲಿ ಇದ್ದ ಬೆಳೆ ನೆಲಕ್ಕೆ ಮಲಗಿದ್ದು, ಅಂದಾಜು 10 ಲಕ್ಷ ರೂ. ನಷ್ಟ ಆಗಿದೆ ಎಂದು ಕೋರ್ಲಹಳ್ಳಿ ರೈತ ವೀರಣ್ಣ ಮಜ್ಜಗಿ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next