Advertisement

ಮುಂಡಾಜೆ ಪ್ರೌಢಶಾಲೆ: ಕಾರ್ತಿಕ ದೀಪಾರಾಧನೆ ವಿಶೇಷ ಕಾರ್ಯಕ್ರಮ

02:55 AM Nov 20, 2018 | Karthik A |

ಬೆಳ್ತಂಗಡಿ: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಮುಂಡಾಜೆ ಪ್ರೌಢಶಾಲೆಯಲ್ಲಿ ಕಾರ್ತಿಕ ದೀಪಾರಾಧನೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ರಾವ್‌ ಕಲ್ಮಂಜ ಅವರು ಪ್ರಧಾನ ದೀಪ ಬೆಳಗಿಸಿ ಚಾಲನೆ ನೀಡಿದರು.

Advertisement

ಮುಖ್ಯಗುರು ಜಯಂತಿ ಮಾತಾಜಿ ಅವರು ದೇವರ ಮಂಟಪಕ್ಕೆ ದೀಪ ಬೆಳಗಿದರು. ವಿದ್ಯಾರ್ಥಿಗಳು ಶಾಲಾ ಆವರಣದ ದೀಪಗಳಿಗೆ ದೀಪದಿಂದ ದೀಪ ಹಚ್ಚಿ, ಪ್ರಾರ್ಥನೆಯನ್ನು ನೆರವೇರಿಸಿದರು. ಹಿರಿಯ ಶಿಕ್ಷಕ ಚಂದ್ರಶೇಖರ ಅವರು ದೀಪಾರಾಧನೆಯ ಮಹತ್ವದ ಕುರಿತು ಪ್ರಧಾನ ಭಾಷಣ ಮಾಡಿದರು. ವಿವೇಕಾನಂದ ವಿದ್ಯಾಸಂಸ್ಥೆಗಳ ಶಾಲಾ ಪರಿವೀಕ್ಷಣಾಧಿಕಾರಿ ರಘುರಾಜ್‌ ಉಬರಡ್ಕ ಅವರು ಶುಭಹಾರೈಸಿದರು. ಸಂಚಾಲಕ ಕೊರಗಪ್ಪ ನಾಯ್ಕ ಅವರು ಅಖಂಡ ಭಾರತದ ಕಲ್ಪನೆಯನ್ನು ಮುಂದಿಟ್ಟರು. ಪ್ರಸಾದ ನಿವೇದನೆಯ ಬಳಿಕ ಆರತಿಯನ್ನು ಬೆಳಗಲಾಯಿತು. ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಆನಂದ ಜಿ. ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next