Advertisement

ಮುಂಡಾಜೆ-ಧರ್ಮಸ್ಥಳ ಮೀಸಲು ಅರಣ್ಯದಲ್ಲಿ ಬೆಂಕಿ

11:49 PM Apr 02, 2023 | Team Udayavani |

ಬೆಳ್ತಂಗಡಿ: ಮುಂಡಾಜೆ-ಧರ್ಮಸ್ಥಳ ಮೀಸಲು ಅರಣ್ಯದ ಧರ್ಮಸ್ಥಳ ಹಾಗೂ ಚಿಬಿದ್ರೆ ಗ್ರಾಮಗಳ ನೇರ್ತನೆ, ಎಕ್ಕೆಲ, ಕೋಟಿಹಿತ್ತಿಲು, ಪೊಸಳಿಕೆ ಮೊದಲಾದ ಪ್ರದೇಶಗಳ ಸುಮಾರು 50ಕ್ಕಿಂತ ಅಧಿಕ ಎಕ್ರೆ ಪ್ರದೇಶದಲ್ಲಿ ಬೆಂಕಿ ಹರಡಿದ ಘಟನೆ ನಡೆದಿದೆ.

Advertisement

ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ಹತೋಟಿಗೆ ತರುವ ಕಾರ್ಯಾಚರಣೆ ರವಿವಾರ ಮುಂದುವರಿಯಿತು.

ಡಿ.ಆರ್‌.ಎಫ್‌.ಒ.ಗಳಾದ ರವೀಂದ್ರ ಅಂಕಲಗಿ, ಭವಾನಿ ಶಂಕರ, ಹರಿಪ್ರಸಾದ್‌ ಯತೀಂದ್ರ, ಗಸ್ತು ಅರಣ್ಯ ಪಾಲಕರಾದ ಪಾಂಡುರಂಗ ಕಮತಿ, ಸದಾನಂದ ಸ್ಥಳೀಯರಾದ ಸಚಿನ್‌ ಭಿಡೆ, ಮುಂಡಪ್ಪ, ಕಿಟ್ಟ, ಗೋಪಾಲ ಮೊದಲಾದವರು ಕಾಡಿನ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶದ ತರಗೆಲೆ, ಒಣಹುಲ್ಲು, ಕಟ್ಟಿಗೆಗೆ ಬೆಂಕಿ ಹಿಡಿದಿದ್ದು ಅರಣ್ಯ ಸಂಪತ್ತಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next