Advertisement

ಮನಪಾ ಚುನಾವಣೆ ನೀತಿಸಂಹಿತೆ: ಸಭೆಗಳು ಬಂಟ್ವಾಳಕ್ಕೆ ಸ್ಥಳಾಂತರ

12:32 AM Oct 24, 2019 | Team Udayavani |

ಬಂಟ್ವಾಳ: ಮಂಗಳೂರು ಮನಪಾ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಮುಖ ಸಭೆಗಳು ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಬುಧವಾರ ದ.ಕ. ಜಿ.ಪಂ. ಸ್ಥಾಯೀ ಸಮಿತಿಯ ಸಭೆಗಳು ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ನಡೆದವು.

Advertisement

ಶಿಕ್ಷಣ ಮತ್ತು ಆರೋಗ್ಯ ಮತ್ತು ಸಾಮಾನ್ಯ ಸ್ಥಾಯೀ ಸಮಿತಿ ಸಭೆಗಳಲ್ಲಿ ಕೆರೆಗಳ ಒತ್ತುವರಿ, ಆಹಾರ ಗುಣಮಟ್ಟ ಕಾಪಾಡುವಿಕೆ, ಎಸ್‌ಟಿಪಿ ಕಡ್ಡಾಯ ಅಳವಡಿಕೆ, ಪ್ರತಿ ಗ್ರಾಮದಲ್ಲಿ 10 ಎಕರೆ ಜಮೀನು ಕಾದಿರಿಸುವಿಕೆ ಮೊದಲಾದ ವಿಚಾರಗಳು ಚರ್ಚೆಯಾದವು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸ್ಥಾಯೀ ಸಮಿತಿ ಸಭೆಯಲ್ಲಿ ಸಿಇಒ ಡಾ| ಆರ್‌. ಸೆಲ್ವಮಣಿ ಭಾಗವಹಿಸಿದ್ದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಸಭೆ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next