Advertisement

ಮುಂಬಯಿ ರಾತ್ರಿ ಜೀವನಕ್ಕೆ ನೀರಸ ಸ್ಪಂದನೆ

09:57 AM Jan 28, 2020 | Hari Prasad |

ಮುಂಬಯಿ: ಭಾರಿ ಸುದ್ದಿ ಮಾಡಿದ್ದ ಮಹಾರಾಷ್ಟ್ರ ಸರಕಾರದ ‘ರಾತ್ರಿ ಜೀವನ’ ಯೋಜನೆ ರವಿವಾರ ರಾತ್ರಿಯಿಂದಲೇ ಜಾರಿಯಾಗಿದೆ. ಇದಕ್ಕೆ ಜನರಿಂದ ಭಾರಿ ಪ್ರತಿಕ್ರಿಯೆ ಸಿಗದಿದ್ದರೂ ಸ್ವಲ್ಪ ಮಟ್ಟಿಗಿನ ಸ್ಪಂದನೆ ದೊರೆತಿದೆ ಎನ್ನಲಾಗಿದೆ. ಮುಂಬಯಿನಲ್ಲಿ ಅಂಗಡಿ ಮುಂಗಟ್ಟುಗಳ ಮಾಲೀಕರು ಇಚ್ಛಿಸಿದರೆ ದಿನದ 24 ಗಂಟೆಗಳೂ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.

Advertisement

ಜ.22ರಂದು ಈ ಯೋಜನೆಗೆ ವಿಧಾನಸಭೆ ಅನುಮೋದನೆ ನೀಡಿತ್ತು. ಆದರೆ ರವಿವಾರ ರಾತ್ರಿ ಮುಂಬಯಿನ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಮಾಲ್‌ಗ‌ಳು, ಅಂಗಡಿಗಳು ಬಾಗಿಲು ಮುಚ್ಚಿದ್ದು ಕಂಡುಬಂದಿತ್ತು. ಮೊದಲ ದಿನವಾದ್ದರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಸ್ಪಂದನೆ ಸಿಗಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next