Advertisement

Mumbai: ಗಾಯಗೊಂಡ ಹಕ್ಕಿಯ ಸಹಾಯಕ್ಕೆ ಹೋಗಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ; ಆಗಿದ್ದೇನು?

09:57 AM May 30, 2023 | Team Udayavani |

ಮುಂಬಯಿ: ಒಂದು ಜೀವಕ್ಕೆ ಸಹಾಯ ಮಾಡಲು ಹೋಗಿ ಮಹಿಳೆಯೊಬ್ಬರು 1 ಲಕ್ಷ ರೂ.ಕಳೆದುಕೊಂಡಿರುವ ಘಟನೆ ಮುಂಬಯಿಯಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಪ್ರಸಿದ್ದ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುವ ಧ್ವನಿ ಮೆಹ್ತಾ ಎಂಬ ಮಹಿಳೆ ಇತ್ತೀಚೆಗೆ ರಸ್ತೆಯಲ್ಲಿ ಗಾಯಗೊಂಡು ಅರೆ ಜೀವ ಸ್ಥಿತಿಯಲ್ಲಿದ್ದ ಹಕ್ಕಿಯೊಂದನ್ನು ನೋಡಿದ್ದಾರೆ. ಕೂಡಲೇ ಅದನ್ನು ರಕ್ಷಿಸಿ ಕೈಯಲ್ಲಿಡಿದು ಅದರ ಸಹಾಯಕ್ಕೆ ಹೋಗಿದ್ದಾರೆ. ಧ್ವನಿ ಮೆಹ್ತಾ ಅವರಿಗೆ ಹಕ್ಕಿಗೆ ಚಿಕಿತ್ಸೆ ನೀಡುವ ಯಾವುದೇ ವೈದ್ಯರು ಗೊತ್ತಿಲ್ಲದ ಕಾರಣ ಗೂಗಲ್‌ ನಲ್ಲಿ ಈ ಕುರಿತು ಹುಡುಕಿದ್ದಾರೆ.

ಗೂಗಲ್‌ ನಲ್ಲಿ ಸಿಕ್ಕ ಟೋಲ್‌ ಫ್ರೀ ನಂಬರ್‌ ವೊಂದಕ್ಕೆ ಕರೆ ಮಾಡಿದ್ದಾರೆ. ಬಳಿಕ ಅತ್ತ ಕಡೆಯಿಂದ ದೂರು ನೀಡಲು ಅಪ್ಲೀಕೇಶನ್‌ ವೊಂದನ್ನು ಭರ್ತಿ ಮಾಡಿ ಎಂದು ಧ್ವನಿ ಮೆಹ್ತಾ ಅವರಿಗೆ ಹೇಳಿದ್ದಾರೆ. ಎನ್‌ ಜಿಒ ಹೇಳಿದ್ದೆಂದು ಈ ಕೆಲಸವನ್ನು ಧ್ವನಿ ಮೆಹ್ತಾ ಮಾಡಿದ್ದಾರೆ. ಅದರಲ್ಲಿದ್ದ ಮಾಹಿತಿಯನ್ನು ಹಾಕಿದ್ದಾರೆ.

ಅಪ್ಲೀಕೇಶನ್‌ ಫಿಲ್‌ ಮಾಡಲು ನಿಗದಿತ ಶುಲ್ಕವಿದ್ದರೂ ಧ್ವನಿ ಮೆಹ್ತಾ ಅವರು ಇದನ್ನು ಪೂರ್ತಿಗೊಳಿಸಿದ್ದಾರೆ. ಈ ಪ್ರಕ್ರಿಯೆ ನಡೆದ ಬಳಿಕವೂ ಅತ್ತ ಕಡೆಯಿಂದ ಯಾವ ಸಹಾಯವೂ ಬಂದಿಲ್ಲ. ಇದಾದ 4 ದಿನಗಳ ಬಳಿಕ ರೈಲಿನಲ್ಲಿ ಸಂಚರಿಸುತ್ತಿದ್ದ ಧ್ವನಿ ಮೆಹ್ತಾ ಅವರ ಮೊಬೈಲ್‌ ಗೆ 99,988 ರೂ. ಕಡಿತವಾಗಿರುವ ಸಂದೇಶ ಬಂದಿದೆ. ಈ ವೇಳೆಯೇ ಅವರಿಗೆ ತಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎನ್ನುವುದರ ಅರಿವು ಬಂದಿದೆ.

ಆಕೆ ಘಟನೆಯ ಬಗ್ಗೆ ಸೈಬರ್ ಕ್ರೈಂ ಇಲಾಖೆಗೆ ಆನ್‌ಲೈನ್‌ನಲ್ಲಿ ವರದಿ ಮಾಡಿದ್ದಾಳೆ ಮತ್ತು ಲಿಖಿತ ದೂರು ಸಲ್ಲಿಸಿದ್ದಾಳೆ.

Advertisement

ಸದ್ಯ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next