Advertisement

ಶಿವಸೇನೆ ತೆಕ್ಕೆಯಲ್ಲೇ ಮುಂಬಯಿ ಪಾಲಿಕೆ ಆಡಳಿತ

03:54 PM Mar 05, 2017 | Team Udayavani |

ಮುಂಬಯಿ: ಬೃಹನ್ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯದ್ದೇ ಪಾರಮ್ಯ ಮುಂದುವರಿಯಲಿದೆ. ಮಾ.8ರಂದು ನಡೆಯುವ ಮೇಯರ್‌, ಉಪ-ಮೇಯರ್‌ ಆಯ್ಕೆಯಲ್ಲಿ ಬಿಜೆಪಿ ಭಾಗಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಶನಿವಾರ ಮುಂಬಯಿನಲ್ಲಿ ಘೋಷಿಸಿದ್ದಾರೆ. 

Advertisement

ತಮ್ಮ ನೇತೃತ್ವದ ಸರಕಾರದ ಸ್ಥಿರತೆಗಾಗಿ ಇಂಥ ನಿರ್ಧಾರ ಕೈಗೊಂಡದ್ದಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಜಾರಿಗೆ ತಂದಿರುವುದಕ್ಕಾಗಿ ಮುಂಬಯಿ ಜನರು ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಪಕ್ಷಕ್ಕೆ ತನ್ನದೇ ಆದ ಬಹುಮತದಿಂದ ಮೇಯರ್‌ ಸ್ಥಾನ ಪಡೆಯು­ವಂತಾಗಬೇಕು ಎಂದು ಹೇಳಿದ್ದಾರೆ ಫ‌ಡ್ನವಿಸ್‌. ಇಷ್ಟು ಮಾತ್ರವಲ್ಲ ಸ್ಥಾಯಿ ಸಮಿತಿ ಚುನಾವಣೆಗಳಲ್ಲಿಯೂ ಪಕ್ಷ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಶಿವಸೇನೆ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳಿಗೆ ಬಿಜೆಪಿ ಬೆಂಬಲ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಬಿಜೆಪಿಯ ನಿರ್ಧಾರವನ್ನು ಶಿವಸೇನೆ ಸ್ವಾಗತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next