Advertisement
ನಡೆದಿದ್ದೇನು? ಪತ್ನಿಯ ಜನ್ಮದಿನ ಆಚರಿಸಲು ಡಿ. 29ರಂದು ರಾಜೇಶ್ ಮಂಗಳೂರಿಗೆ ಹೊರಟಿದ್ದರು. ಹೊಸ ವರ್ಷ ನಿಮಿತ್ತ ವಿಮಾನ ಯಾನ ದುಬಾರಿಯಾಗಿದ್ದರಿಂದ ಕೊನೆ ಕ್ಷಣದಲ್ಲಿ ರೈಲಿನಲ್ಲಿ ಊರಿಗೆ ಹೊರಟಿದ್ದರು. ಜಾಮ್ನಗರ ಎಕ್ಸ್ಪ್ರೆಸ್ ಮೂಲಕ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುತ್ತಿದ್ದರು.
ರಾಜೇಶ್ ಸೋಮವಾರ ಉದ್ಯೋಗ ನಿಮಿತ್ತ ಭಾಯಂದರ್ನಲ್ಲಿ ಲೋಕಲ್ ರೈಲು ಹಿಡಿದಿದ್ದು, ರೈಲು ಗೋರೆಗಾಂವ್ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಂತೆ ರೈಲಿನಲ್ಲಿ ಮೂವರನ್ನು ನೋಡಿದ್ದಾರೆ. ಇವರಲ್ಲಿ ಇಬ್ಬರನ್ನು ಎಲ್ಲೋ ನೋಡಿದಂತೆ ಆಗಿದ್ದು, ಕೂಡಲೇ ಅವರಿಗೆ ಬಿಸ್ಕೆಟ್, ಮತ್ತಿನೌಷಧ ತಿಂದು ಪ್ರಜ್ಞಾಹೀನನಾಗಿದ್ದು ನೆನಪಾಗಿದೆ. ಕೂಡಲೇ ಅವರಲ್ಲೊಬ್ಬನ ಶರಟಿನ ಕಾಲರನ್ನು ರಾಜೇಶ್ ಹಿಡಿದಿದ್ದು, ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರು ರೈಲಿನಿಂದ ಜಿಗಿದು ಪರಾರಿಯಾಗಿದ್ದು, ಸಹ ಪ್ರಯಾಣಿಕರ ಸಹಾಯದಿಂದ ಓರ್ವನನ್ನು ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮಧ್ಯಪ್ರದೇಶ ಮೂಲದ ದೀಪಕ್ ಸಾಹು (35) ಎಂದು ಗುರುತಿಸಲಾಗಿದೆ. ಈತ ಗ್ಯಾಂಗ್ ಒಂದರಲ್ಲಿ ಸಕ್ರಿಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ದರೋಡೆಕೋರರು, 15 ಸಾವಿರ ನಗದು, ಕ್ರೆಡಿಟ್, ಡೆಬಿಟ್ ಕಾರ್ಡ್, 2 ಫೋನ್ಗಳನ್ನು ಲಪಟಾಯಿಸಿದ್ದರು. ಮಂಗಳೂರು ನಿಲ್ದಾಣದಲ್ಲಿ ಬಂದು ಬಿದ್ದ ಕಾರಣ ಪಕ್ಕೆಲುಬಿಗೆ ಗಾಯವಾಗಿತ್ತು. ರಾಜೇಶ್ ಅವರಿಗೆ ಮತ್ತಿನೌಷಧ ನೀಡಿದ ಬಗ್ಗೆ ವೆನಾಕ್ ವೈದ್ಯರು ವರದಿ ನೀಡಿದ್ದು, ಪನ್ವೇಲ್ನಲ್ಲೂ ದೂರು ದಾಖಲಾಗಿತ್ತು.
Advertisement
ಆ ಘಟನೆ ನೆನಪಿಸಿಕೊಂಡಾಗ ಸತ್ತು ಬದುಕಿ ಬಂದ ಅನುಭವವಾಗುತ್ತದೆ. ನನ್ನಂತೆ ಬೇರೆಯವರು ಇವರಿಂದ ನೋವು ಅನುಭವಿಸಬಾರದೆಂಬ ಉದ್ದೇಶದಿಂದ ಆರೋಪಿಗಳನ್ನು ಹಿಡಿಯಲು ಮುಂದಾದೆ. ಸಹ ಪ್ರಯಾಣಿಕರು ಪ್ರಾರಂಭದಲ್ಲೇ ಸಹಕಾರ ನೀಡಿದ್ದರೆ ಎಲ್ಲರನ್ನೂ ಹಿಡಿಯಬಹುದಿತ್ತು. ಕಳ್ಳರು ಎಂದು ಬೊಬ್ಬೆ ಹಾಕಿದ್ದರಿಂದ ಮತ್ತೂಬ್ಬರ ನೆರವಿನಲ್ಲಿ ಓರ್ವನನ್ನು ಮಾತ್ರ ಹಿಡಿಯಲು ಸಾಧ್ಯವಾಗಿದೆ. ವಿಲಾಸಿಗರ ರೀತಿ ಇರುವ ಅವರನ್ನು ಕಳ್ಳರೆಂದು ನಂಬಲು ಸಾಧ್ಯವೇ ಇಲ್ಲ. ಪ್ರಯಾಣಿಕರು ಅಪರಿಚಿತರು ನೀಡುವ ಆಹಾರವನ್ನು ದಯವಿಟ್ಟು ತಿನ್ನಲು ಹೋಗಬೇಡಿ. ರಾಜೇಶ್ ಕುಲಾಲ್