Advertisement
ಆರಂಭದಿಂದಲೂ ನಂ.20645/46 ವಂದೇಭಾರತ್ ಎಕ್ಸ್ಪ್ರೆಸ್ ರೈಲನ್ನು ಮುಂಬಯಿಗೆ ವಿಸ್ತರಿಸಬೇಕು ಎನ್ನುವ ಒತ್ತಾಸೆಯನ್ನು ಪ್ರಯಾಣಿಕರು ಮುಂದಿರಿಸಿದ್ದರು. ಅದನ್ನು ಈಡೇರಿಸಬೇಕು. ಅಥವಾ ಮುಂಬಯಿ-ಮಡಗಾಂವ್ ಮಧ್ಯೆ ಸಂಚರಿಸುತ್ತಿರುವ ನಂ.22229/30 ವಂದೇಭಾರತ್ ರೈಲನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ಈ ರೈಲು ಮೂಕಾಂಬಿಕಾ ರೋಡ್ ಬೈಂದೂರು ಮತ್ತು ಕುಮಟಾ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ. ಈ ಎರಡೂ ನಿಲ್ದಾಣಗಳಿಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಬರುತ್ತಾರೆ. ಆದರೆ ವಂದೇಭಾರತ್ಗೆ ನಿಲುಗಡೆ ಇರದ ಕಾರಣ
ಪ್ರಯಾಣಿಕರು ಸೌಲಭ್ಯವನ್ನು ಬಳಸಿಕೊಳ್ಳದಂತಾಗಿದೆ. ಮುಂಬಯಿಗೆ ವಿಸ್ತರಣೆಯಾಗುವಾಗಲೂ ಈ ಎರಡು ನಿಲ್ದಾಣಗಳಲ್ಲಿ ನಿಲುಗಡೆ ಒದಗಿಸಬೇಕು ಎಂದು ನಳಿನ್ ಒತ್ತಾಯಿಸಿದ್ದಾರೆ.
Related Articles
Advertisement
ಮುಂಬಯಿ ಮಡಗಾಂವ್ ವಂದೇಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸುವಾಗ ಮಂಗಳೂರು ಮಡಗಾಂವ್ ವಂದೇಭಾರತ್ನ ರೇಕ್ಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು, ಆ ಮೂಲಕ ರೇಕ್ ಸಂಖ್ಯೆ 8ರಿಂದ 16ಕ್ಕೇರಲಿದೆ. ಅಥವಾ ಮುಂಬಯಿ ಮಡಗಾಂವ್ ವಂದೇಭಾರತ್ ಮಂಗಳೂರಿಗೆ ವಿಸ್ತರಣೆ ಅಸಾಧ್ಯವಾದರೆ ಮಂಗಳೂರು ಮಡಗಾಂವ್ ರೈಲನ್ನೇ ಮುಂಬಯಿಗೆ ಈಗಿರುವ ಕೋಚ್ ಗಳೊಂದಿಗೆ ವಾರಕ್ಕೆ ಮೂರು ದಿನಗಳಂತೆ ಮುಂಬಯಿ ಮತ್ತು ಮಂಗಳೂರು ಸೆಂಟ್ರಲ್ ಮಧ್ಯೆ ಓಡಿಸಿದರೆ ಜನರಿಗೆ ಅನುಕೂಲವಾಗಲಿದೆ. ಹಾಗೆಯೇ ಪ್ರವಾಸೋದ್ಯಮಕ್ಕೂ ಪುಷ್ಟಿ ಸಿಗಲಿದೆ ಎಂದೂ ತಿಳಿಸಿದ್ದಾರೆ.