Advertisement
ಉತ್ತರಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದೀಚೆಗೆ ಬೀಸಿದ ಧೂಳು ಬಿರುಗಾಳಿ, ಸಿಡಿಲಿನಬ್ಬರಕ್ಕೆ 11 ಜಿಲ್ಲೆಗಳ 26 ಮಂದಿ ಬಲಿಯಾಗಿದ್ದಾರೆ. ಇತ್ತೀಚೆಗಷ್ಟೇ ನೂರಾರು ಮಂದಿಯನ್ನು ಬಲಿತೆಗೆದುಕೊಂಡ ಧೂಳು ಬಿರುಗಾಳಿಯು ಯು.ಪಿ. ಜನರನ್ನು ಕಂಗೆಡಿಸಿದೆ. ಭಾನುವಾರವೂ ರಾಜ್ಯದ ಹಲವೆಡೆ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಎಚ್ಚರಿಕೆಯಲ್ಲಿರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಶನಿವಾರ ಸಂಜೆ ಗಂಟೆಗೆ 70 ಕಿ.ಮೀ. ವೇಗದಲ್ಲಿ ಧೂಳು ಬಿರುಗಾಳಿಯು ದೆಹಲಿಯನ್ನು ಅಪ್ಪಳಿಸಿದೆ. ಸಂಜೆ ದಿಢೀರನೆ ಬೀಸಿದ ಗಾಳಿ ಹಾಗೂ ಮಳೆ ಯಿಂದಾಗಿ ಜನರು ತತ್ತರಿಸಿಹೋಗಿ ದ್ದಾರೆ. ಸಂಜೆ 5 ಗಂಟೆ ವೇಳೆಗೆ ಧೂಳು ಬಿರುಗಾಳಿ ಬೀಸಿದ ಕಾರಣ, ದೆಹಲಿಗೆ ದೆಹಲಿಯೇ ಕತ್ತಲಲ್ಲಿ ಮುಳುಗಿದಂತೆ ಕಂಡುಬಂತು. ಮೆಟ್ರೋ ರೈಲುಗಳ ಸಂಚಾರ ವ್ಯತ್ಯಯ ವಾಯಿತು. ಪ್ರತಿ ಕೂಲ ಹವಾಮಾನ ದಿಂದಾಗಿ 18 ವಿಮಾನಗಳ ಮಾರ್ಗ ಬದಲಿಸಲಾಯಿತು.
Related Articles
2ಮುಂಬೈನ ಮಳೆ ಸಂಬಂಧಿ ಘಟನೆಗಳಿಗೆ ಬಲಿಯಾದವರು
70 ಕಿ.ಮೀ. ದೆಹಲಿಯಲ್ಲಿ ಧೂಳು ಬಿರುಗಾಳಿಯ ವೇಗ (ಗಂಟೆಗೆ)
18 ವಿಮಾನಗಳ ಸಂಚಾರ ವ್ಯತ್ಯಯ
Advertisement