Advertisement

ಮುಂಬೈ ಮಹಾಮಳೆಗೆ ಕೊಚ್ಚಿಹೋದ ಖ್ಯಾತ ವೈದ್ಯ ಅಮರಾಪುರ್ಕರ್!

04:53 PM Aug 30, 2017 | Sharanya Alva |

ಮುಂಬೈ: ಮಂಗಳವಾರ ಮುಂಬೈಯಲ್ಲಿ ಸುರಿದ ಮಹಾಮಳೆಗೆ ಪ್ರಸಿದ್ಧ ವೈದ್ಯ ದೀಪಕ್ ಅಮರಾಪುರ್ಕರ್ ಅವರು ಕೊಚ್ಚಿಹೋದ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಭಾರೀ ಮಳೆಯಿಂದಾಗಿ ರೈಲು, ವಿಮಾನ, ವಾಹನ ಸಂಚಾರ ಸ್ತಬ್ಧಗೊಂಡು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಬಾಂಬೆ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಆಗಿದ್ದ ಡಾ.ಅಮರಾಪುರ್ಕರ್ ಅವರು ಮಂಗಳವಾರ ಸಂಜೆ ತನ್ನನ್ನು ಮನೆಗೆ ಬಿಡುವಂತೆ ಡ್ರೈವರ್ ಬಳಿ ಹೇಳಿದ್ದರು. ಅದರಂತೆ ಆತ ಎಲ್ಫಿನ್ ಸ್ಟನ್ ರಸ್ತೆ ಸಮೀಪ ಇರುವ ಮನೆ ಬಳಿ ಬಿಟ್ಟಿದ್ದ. ಪ್ರವಾಹದಿಂದ ತುಂಬಿ ಹೋಗಿದ್ದ ರಸ್ತೆಯ ಮ್ಯಾನ್ ಹೋಲ್ ಗೆ ಡಾ.ಅಮರಾಪುರ್ಕರ್ ಅವರು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.

ಮ್ಯಾನ್ ಹೋಲ್ ನಲ್ಲಿ ಅಗ್ನಿಶಾಮಕ ದಳ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿಗಳು ಶೋಧಕಾರ್ಯ ನಡೆಸಿದ್ದರು. ಆದರೆ ಯಾವುದೇ ಮೃತದೇಹ ಸಿಕ್ಕಿಲ್ಲ ಎಂದು ದಾದರ್ ಅಧಿಕಾರಿ ಸುನಿಲ್ ದೇಶ್ ಮುಖ್ ತಿಳಿಸಿದ್ದಾರೆ. ವೈದ್ಯರು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next