Advertisement

Kidnappe:ಮ್ಯೂಸಿಕ್‌ ಕಂಪನಿ ಸಿಇಒ ಅಪಹರಣ; ಶಿಂಧೆ ಬಣದ ಶಾಸಕನ ಪುತ್ರನ ವಿರುದ್ಧ FIR

03:05 PM Aug 10, 2023 | |

ಮುಂಬೈ: ಮ್ಯೂಸಿಕ್‌ ಕಂಪನಿಯ ಸಿಇಒ ಅವರನ್ನು ಗನ್‌ ಪಾಯಿಂಟ್‌ ಇಟ್ಟು ಅಪಹರಿಸಿರುವ ಆರೋಪದ ಮೇಲೆ ಸಿಎಂ ಶಿಂಧೆ ನೇತೃತ್ವದ ಶಿವಸೇನಾ ಶಾಸಕ ಪ್ರಕಾಶ್‌ ಸುರ್ವೇ ಪುತ್ರ ರಾಜ್‌ ಸುರ್ವೇ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.

Advertisement

ಹಾಡಹಗಲೇ ತನ್ನ ಬೆಂಬಲಿಗರೊಂದಿಗೆ ಮ್ಯೂಸಿಕ್‌ ಕಂಪನಿಯೊಳಕ್ಕೆ ನುಗ್ಗಿದ ರಾಜ್‌ ಸುರ್ವೇ ಏಕಾಏಕಿ ಉದ್ಯಮಿ, ಸಿಇಒ ಮನೋಜ್‌ ಮಿಶ್ರಾಗೆ ಹಿಗ್ಗಾಮುಗ್ಗಾ ಹೊಡೆದು, ಗನ್‌ ಪಾಯಿಂಟ್‌ ಮೂಲಕ ಕಿಡ್ನಾಪ್‌ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆದಿ ಶಕ್ತಿ ಪ್ರೈವೇಟ್‌ ಲಿಮಿಟೆಡ್‌ ಮ್ಯೂಸಿಕ್‌ ಕಂಪನಿಯ ಸಿಇಒ ಮನೋಜ್‌ ಮಿಶ್ರಾ ಅವರನ್ನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ಕಚೇರಿಯ ಸಿಬಂದಿಗಳು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಮಿಶ್ರಾ ಅವರನ್ನು ರಕ್ಷಿಸಿರುವುದಾಗಿ ವರದಿ ವಿವರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ ಸುರ್ವೇ ಹಾಗೂ ಇತರ 10 ಮಂದಿ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ. ವರದಿಯಂತೆ, ಮನೋಜ್‌ ಮಿಶ್ರಾ ಅವರನ್ನು ಅಪಹರಿಸಿಕೊಂಡು ಶಾಸಕರ ಕಚೇರಿಗೆ ಕರೆತಂದು ಗನ್‌ ಇಟ್ಟು ಬೆದರಿಸಿ ಕೆಲವೊಂದು ದಾಖಲೆಗೆ ಸಹಿ ಹಾಕಿಸಿಕೊಂಡಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next