Advertisement

ಮುಂಬಯಿ: ಸೇತುವೆ ಕುಸಿದು 5 ಸಾವು

12:30 AM Mar 15, 2019 | Team Udayavani |

ಮುಂಬಯಿ: ವಾಣಿಜ್ಯ ನಗರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ರೈಲ್ವೆ ಸ್ಟೇಷನ್‌ನಲ್ಲಿನ ಪಾದಚಾರಿ ಸೇತುವೆ ಕುಸಿದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಐವರು ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಹಲವರು ಕುಸಿದ ಸೇತುವೆಯಡಿ ಸಿಲುಕಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದೆ. ಈ ಸೇತುವೆ ರೈಲ್ವೆ ಸ್ಟೇಷನ್‌ ಹಾಗೂ ಆಜಾದ್‌ ಮೈದಾನ್‌ ಪೊಲೀಸ್‌ ಸ್ಟೇಷನ್‌ ಮತ್ತು ಟೈಮ್ಸ್‌ ಆಫ್ ಇಂಡಿಯಾ ಕಚೇರಿಯ ಕಟ್ಟಡವನ್ನು ಸಂಪರ್ಕಿಸುತ್ತದೆ. ಇದು ರೈಲ್ವೆ ಹಳಿ ಯಿಂದ ಹೊರಗಿದ್ದುದರಿಂದ ರೈಲು ಓಡಾಟಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next