Advertisement

ಮುಲುಂಡ್‌ ಬಂಟ್ಸ್‌ ನೂತನ ಅಧ್ಯಕ್ಷ ವಸಂತ್‌ ಶೆಟ್ಟಿ ಪಲಿಮಾರು ಅವರಿಗೆ ಅಭಿನಂದನೆ

12:30 PM Jul 27, 2019 | Team Udayavani |

ನವಿ ಮುಂಬಯಿ, ಜು. 26: ಮುಲುಂಡ್‌ ಬಂಟ್ಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ವಸಂತ್‌ ಶೆಟ್ಟಿ ಪಲಿಮಾರು ಅವರನ್ನು ಜು. 25 ರಂದು ನವಿ ಮುಂಬಯಿಯ ಸುಪ್ರೀಂ ಹೆರಿಟೇಜ್‌ ಹೊಟೇಲ್ನಲ್ಲಿ ನಡೆದ ಅಖೀಲ ಭಾರತ ಬಸ್‌ ಮಾಲಕರ ಸಂಘದ ಸಭೆಯಲ್ಲಿ ಪಾಲ್ಗೊಂಡಿದ್ದ ಮೂಡಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್‌ ಅವರು ಅಭಿನಂದಿಸಿ ಶುಭ ಹಾರೈಸಿದರು.

Advertisement

ಈ ಸಂದರ್ಭ ಮುಲುಂಡ್‌ ಹೊಟೇಲ್ ಉದ್ಯಮಿಗಳಾದ ಕರಿಯಣ್ಣಶೆಟ್ಟಿ, ಹೊಟೇಲ್ ಅರ್ಚನದ ಮಾಲಕ ಕರುಣಾಕರ ಶೆಟ್ಟಿ, ನವಿಮುಂಬಯಿ ಮಾಜಿ ನಗರ ಸೇವಕ ಸಂತೋಷ್‌ ಶೆಟ್ಟಿ ಅದ್ಯಪಾಡಿ, ಸುಪ್ರೀಂ ಹೆರಿಟೇಜ್‌ನ ಮಾಲಕಅಜೆಕಾರು ಶಿವರಾಮ ಜಿ. ಶೆಟ್ಟಿ, ಮುಲುಂಡ್‌ ಬಂಟ್ಸ್‌ನ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್‌ ಅಡ್ಯಂತಾಯ, ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ಮಂಗಳೂರಿನ ಆರ್‌. ಕೆ. ಬಸ್‌ನ ಮಾಲಕರಾದ ಮಾಧವ ನಾಯಕ್‌ ಅಡ್ಯಾರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next