Advertisement

ಬಹುಮುಖಿ ದೆವ್ವ !

11:29 PM Jul 11, 2019 | mahesh |

‘ಇಲ್ಲೊಂದು ದೆವ್ವ ಇದೆ. ಅದಕ್ಕೂ ನೋವಿದೆ, ದ್ವೇಷವೂ ಇದೆ. ಅದು ಅಳುತ್ತೆ, ಅಳಿಸುತ್ತೆ, ಬೆಚ್ಚಿ ಬೀಳಿಸುತ್ತೆ. ಅಷ್ಟೇ ಅಲ್ಲ, ಮನುಷ್ಯನಿಗೆ ಇರಬೇಕಾದ ಎಲ್ಲಾ ಸಂಕಷ್ಟಗಳೂ ಅದಕ್ಕಿವೆ…’

Advertisement

– ದೆವ್ವದ ಕುರಿತು ಹೀಗೆ ಹೇಳುತ್ತಾ ಹೋದರು ನಟಿ ನೀತು. ಅವರು ಹೇಳಿದ್ದು, ‘ವಜ್ರಮುಖೀ’ ಸಿನಿಮಾದಲ್ಲಿ ಬರುವ ದೆವ್ವದ ಬಗ್ಗೆ. ಹೌದು, ‘ವಜ್ರಮುಖೀ’ ಹಾರರ್‌ ಕಥಾಹಂದರ ಹೊಂದಿರುವ ಸಿನಿಮಾ. ಜುಲೈ 19 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಆ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು.

ನಟಿ ನೀತು, ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಂದರೆ, ಅದು ದೆವ್ವದ ಪಾತ್ರವಂತೆ. ಆ ಬಗ್ಗೆ ಹೇಳಿಕೊಂಡ ನೀತು, ‘ನಾನಿಲ್ಲಿ ದೆವ್ವದ ಪಾತ್ರ ಮಾಡಿದ್ದೇನೆ. ಆ ಬಗ್ಗೆ ಹೆಚ್ಚು ಹೇಳು­ವಂತಿಲ್ಲ. ಹಾರರ್‌ ಚಿತ್ರಗಳಲ್ಲಿ, ಈಗಾಗಲೇ ನಾಗವಲ್ಲಿ, ಕಾಂಚನಾ ಹೆಸರಿನ ದೆವ್ವಗಳು ಫೇಮಸ್‌ ಆಗಿವೆ. ಆ ಸಾಲಿಗೆ ‘ವಜ್ರಮುಖೀ’ ದೆವ್ವ ಕೂಡ ಸೇರುವ ನಂಬಿಕೆ ಇದೆ ಎಂದು ಹೇಳಿಕೊಂಡ ನೀತು, ನಾನು ಇದುವರೆಗೆ 39 ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನ್ನ 35 ನೇ ಸಿನಿಮಾ. ನನಗಿದು ವಿಶೇಷ ಚಿತ್ರ. ಕಾರಣ, ಇದೇ ಮೊದಲ ಸಲ ನಾನು ದೆವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ನನಗೆ ಸಾಕಷ್ಟು ಫ್ರೀಡಮ್‌ ಕೊಟ್ಟಿದ್ದರು. ಹಾಗಾಗಿ, ಆ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಾಯಿತು. ಒಟ್ಟಾರೆ ‘ವಜ್ರಮುಖೀ’ ಸಿನಿಮಾದ ಉದ್ದೇಶವಿಷ್ಟೇ, ನೋಡುಗರಿಗೆ ಒಂದು ಹೊಸ ಥ್ರಿಲ್ ಮತ್ತು ಫೀಲ್ ಸಿಗಬೇಕು. ಎಷ್ಟೋ ಹಾರರ್‌ ಚಿತ್ರಗಳು ಬಂದಿವೆಯಾದರೂ, ಇದೊಂದು ಕಲ್ಪನೆಯ ದೆವ್ವದ ಕಥೆ ಇದೆ. ಹಾರರ್‌ ಇಷ್ಟಪಡುವ ಜನರಿಗೆ ಖಂಡಿತ ‘ವಜ್ರಮುಖೀ’ ಬೇಸರ ತರಿಸಲ್ಲ ‘ ಎಂಬುದು ನೀತು ಮಾತು.

ನಿರ್ಮಾಪಕ ಶಶಿಕುಮಾರ್‌ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು ‘ಸಿಗಂಧೂರು ಚೌಡೇಶ್ವರಿ ‘ ಚಿತ್ರ ನಿರ್ಮಿಸಿದ್ದರು. ಈಗ ‘ವಜ್ರಮುಖೀ’ ನಿರ್ಮಿಸಿದ್ದಾರೆ. ‘ಇಲ್ಲಿ ತ್ರಿಕೋನ ಪ್ರೇಮಕಥೆ ಇದೆ. ಅದರೊಂದಿಗೆ ಹಾರರ್‌ ಅಂಶಗಳೂ ಇವೆ. ಎನ್‌.ಕುಮಾರ್‌ ಅವರ ಸಹಕಾರದೊಂದಿಗೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ದಿಲೀಪ್‌ ಪೈ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸಂಜನಾ ಎಂಬ ಹೊಸ ಪ್ರತಿಭೆಯೂ ಇಲ್ಲಿದೆ. ನೀತು ಸಿನಿಮಾದ ಹೈಲೈಟ್. ಪಿಕೆಎಚ್ ದಾಸ್‌ ಅವರ ಛಾಯಾಗ್ರಹಣವಿದೆ. ರೆಗ್ಯುಲರ್‌ ಫಾರ್ಮೆಟ್‌ನಲ್ಲಿ ಈ ಚಿತ್ರವಿಲ್ಲ. ಒಂದು ಮರ್ಡರ್‌ ಮಿಸ್ಟರಿಯಿಂದ ಏನೆಲ್ಲಾ ಆಗುತ್ತೆ ಎಂಬುದು ಸಸ್ಪೆನ್ಸ್‌’ ಎಂದರು ಶಶಿಕುಮಾರ್‌.

ವಿತರಕ ಎನ್‌.ಕುಮಾರ್‌ ಅವರಿಗೆ ನಿರ್ಮಾಪಕ ಶಶಿಕುಮಾರ್‌ ಬಂದು, ‘ವಜ್ರಮುಖೀ’ ಚಿತ್ರ ವಿತರಣೆ ಮಾಡಿಕೊಡಿ ಅಂದಾಗ, ಸದ್ಯಕ್ಕೆ ನಾನು ವಿತರಣೆ ಬಗ್ಗೆ ಹೆಚ್ಚು ಗಮನಕೊಡುತ್ತಿಲ್ಲ. ನಿಮಗೆ ನಾನು ಸಹಕಾರ ಕೊಡುತ್ತೇನೆ ನೀವೇ ರಿಲೀಸ್‌ ಮಾಡಿ ಅಂತ, ಸಾಥ್‌ ನೀಡಿದ್ದಾರಂತೆ. ಇಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತೆ ಎಂಬುದು ಮುಖ್ಯ ಅಲ್ಲ, ಎಷ್ಟು ದಿನ ಚಿತ್ರಮಂದಿರದಲ್ಲಿರುತ್ತೆ ಎಂಬುದು ಮುಖ್ಯ. ಸಿನಿಮಾ ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ. ಹೊಸಬರ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ’ ಎಂದರು ಕುಮಾರ್‌.

Advertisement

ನಿರ್ದೇಶಕ ಆದಿತ್ಯ ಕುಣಿಗಲ್ ಹೆಚ್ಚು ಮಾತನಾಡಲಿಲ್ಲ. ಎಲ್ಲರೂ ನಮಗೆ ಬೆಂಬಲ ಕೊಡಬೇಕು ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರದ ಸಹನಿರ್ಮಾಪಕಿ ಗೀತಾ ಅವರಿಗೆ ಇದು ಹೊಸ ಅನುಭವವಂತೆ. ಸಿನಿಮಾ ನೋಡಿದ್ದೇನೆ. ಅಂದುಕೊಂಡಂತೆ ಮೂಡಿಬಂದಿದೆ.ಹಾರರ್‌ ಇಷ್ಟಪಡುವ ವರ್ಗಕ್ಕೆ ಇದು ಇಷ್ಟವಾಗುತ್ತೆ ಎಂಬ ನಂಬಿಕೆ ನಮಗಿದೆ ಎಂದಷ್ಟೇ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next