Advertisement

ಮೂಲ್ಕಿ: ಬಂಧಿತರಿಂದ  5.30ಲ.ರೂ.ಸೊತ್ತು ವಶ

06:20 AM Mar 11, 2018 | Team Udayavani |

ಮೂಲ್ಕಿ: ಜುಲೈ 2017ರಲ್ಲಿ ನಡೆದಿದ್ದ  ಗುತ್ತಗಾಡಿನ  ಮತ್ತು ಮೂಲ್ಕಿ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇಗುಲಗಳಿಂದ  ಬೆಳ್ಳಿಯ ಸೊತ್ತುಗಳನ್ನು ಕಳವುಗೈದ ಆರೋಪದಲ್ಲಿ ಮೂಲ್ಕಿ ಪೊಲೀಸರು ಬಂಧಿಸಿರುವ  ಅಂತರ್‌ ಜಿಲ್ಲಾ ಕುಖ್ಯಾತ ಕಳ್ಳರಾದ  ತುಮಕೂರು ಜಿಲ್ಲೆ ಸೊರೆಕುಂಟೆಯ ನವೀನ ಯಾನೆ ಅಣ್ಣಾಬಾಂಡ್‌ ಯಾನೆ ಬೆಂಕಿ ನವೀನ (24) ಮತ್ತು ಬೆಂಗಳೂರು ಗೇರು ಪಾಳ್ಯದ ವಿಕಾಸ್‌ ಸ. ಶಾಲೆ ಬಳಿಯ ನಿವಾಸಿ ವೆಂಕಟೇಶ ಯಾನೆ ಡಾಬರ್‌(37)  ಅವರಿಂದ 5.30 ಲಕ್ಷ ರೂ. ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  

Advertisement

ಗುತ್ತಕಾಡು ದೇಗುಲದ 1.5 ಲ.ರೂ. ಮೌಲ್ಯದ ಬೆಳ್ಳಿಯ ಪ್ರಭಾವಳಿ, ಕೊಲ್ಲೂರು ಮೂಕಾಂಬಿಕಾ ದೇಗುಲದ 1.5 ಲ.ರೂ. ಮೌಲ್ಯದ ಬೆಳ್ಳಿಯ ಪ್ರಭಾವಳಿ, ಗುತ್ತಕಾಡು ದೇವಸ್ಥಾನದ 28, 000 ರೂ. ಮೌಲ್ಯದ ಒಂದು ಪವನು ತೂಕದ ಮಾಂಗಲ್ಯ ಸರ, 1. 30 ಲ.ರೂ. ಮೌಲ್ಯದ ಬಜಾಜ್‌ ಮೋಟಾರ್‌ ಸೈಕಲ್‌, 60,000 ರೂ. ಮೌಲ್ಯದ ಇನ್ನೊಂದು ಬಜಾಜ್‌ ದ್ವಿಚಕ್ರ ವಾಹನ, 14,000 ರೂ. ಮೌಲ್ಯದ 4 ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ.
 
ಪತ್ತೆ ಕಾರ್ಯದಲ್ಲಿ ಮೂಲ್ಕಿ ಠಾಣಾ ನಿರೀಕ್ಷಕ ಅನಂತಪದ್ಮನಾಭ, ಪಿಎಸ್‌ಐ ಶೀತಲ್‌ ಅಲಗೂರ್‌, ಎಎಸ್‌ಐ ಚಂದ್ರಶೇಖರ್‌, ಸಿಬಂದಿ ವರ್ಗದ ಧರ್ಮೇಂದ್ರ, ಅಣ್ಣಪ್ಪ, ಮಹಮ್ಮದ್‌ ಹುಸೇನ್‌, ಸಿದ್ದು ಬಾಬ ನಗರ, ಸುರೇಶ್‌, ಬಸವರಾಜ, ಮನೋಜ್‌ ಕುಮಾರ್‌  ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next