Advertisement

ಮೂಲ್ಕಿ:ಕಂಟೈನರ್‌ -ಕಾರು ಢಿಕ್ಕಿ;ಓರ್ವ ಸಾವು

01:07 AM May 02, 2019 | Sriram |

ಸುರತ್ಕಲ್‌: ಮೂಲ್ಕಿ ಸಮೀಪದ ಕೊಲ್ನಾಡ್‌ನ‌ಲ್ಲಿ ಬುಧವಾರ ನಸುಕಿನಲ್ಲಿ ಕಂಟೈನರ್‌ ಮತ್ತು ಡಿಸ್ಕವರಿ ಕಾರು ಢಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ್ದಾರೆ.

Advertisement

ಬೆಂಗಳೂರಿನ ಉಮಾಶಂಕರ್‌ (52) ಮೃತಪಟ್ಟವರು.ಮಂಗಳೂರಿನಿಂದ ಚಾಕೊಲೇಟ್‌ ತುಂಬಿಕೊಂಡು ಗುಜರಾತ್‌ ಕಡೆ ಹೋಗುತ್ತಿದ್ದ ಕಂಟೈನರ್‌ ಲಾರಿಗೆ ಕೊಲ್ನಾಡ್‌ ಬಳಿ ಅತಿ ವೇಗದಲ್ಲಿ ಬಂದ ಕಾರು ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತು. ಪರಿಣಾಮ ಚಾಲಕನ ಎಡಬದಿ ಯಲ್ಲಿದ್ದ ಉಮಾಶಂಕರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಾಲಕ ರಾಜಾರಾಂ ಹೆಗಡೆ ಮತ್ತು ಹಿಂಬದಿಯಲ್ಲಿದ್ದ ಅಮಿತ್‌ ರಾವ್‌ ಗಾಯಗೊಂಡಿ ದ್ದಾರೆ.ಉಮಾಶಂಕರ್‌ ತಲೆಯ ಚಿಪ್ಪು ಜಾರಿ ಹೋಗಿದೆ.

ಬಲೂನ್‌ ತೆರೆದುಕೊಳ್ಳಲಿಲ್ಲ
ಅಪಘಾತ ಸಂಭವಿಸಿದ ಕೂಡಲೇ ಸುರಕ್ಷತಾ ಬಲೂನ್‌ ತೆರೆದು
ಕೊಳ್ಳಬೇಕಾಗಿತ್ತು.ಆದರೆ ಈ ಕಾರಿನಲ್ಲಿ ತೆರೆದು ಕೊಳ್ಳಲಿಲ್ಲ. ಇದು ಕಾರಿನ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next