Advertisement

ನೀವು 2019ರಲ್ಲಿಯೂ ಮತ್ತೊಮ್ಮೆ ಪ್ರಧಾನಿಯಾಗಬೇಕು; ಮೋದಿಗೆ ಮುಲಾಯಂ

11:12 AM Feb 13, 2019 | Team Udayavani |

ನವದೆಹಲಿ: ರಾಜಕೀಯದಲ್ಲಿ ಯಾರೂ ಅಜನ್ಮ ಶತ್ರುಗಳಾಗಿ ಇರುವುದಿಲ್ಲ ಎಂಬುದಕ್ಕೆ ಬುಧವಾರ ಲೋಕಸಭೆಯ ಕಲಾಪದಲ್ಲಿ ನಡೆದ ಮುಲಾಯಂ ಸಿಂಗ್ ಯಾದವ್ ವ್ಯಕ್ತಪಡಿಸಿದ ಅಭಿಪ್ರಾಯ ಸಾಕ್ಷಿಯಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂದು ಹೇಳಿದರು.

Advertisement

ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಅವರು ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಬಹುಕಾಲದ ಶತ್ರುವಾಗಿದ್ದ ಬಹುಜನ್ ಸಮಾಜ ಪಕ್ಷದ ಜೊತೆ ಸಮಾಜವಾದಿ ಪಕ್ಷ ಕೈಜೋಡಿಸಿದೆ. ಏತನ್ಮಧ್ಯೆ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಅವರು ಬಹಿರಂಗವಾಗಿ ತಮ್ಮ ಬೆಂಬಲವನ್ನು ಪ್ರಧಾನಿ ಮೋದಿ ಅವರಿಗೆ ನೀಡಿದ್ದಾರೆ.

ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಪ್ರತಿಯೊಬ್ಬರನ್ನೂ ಒಗ್ಗೂಡಿಸಿಕೊಂಡು ಹೋಗಲು ಪ್ರಯತ್ನಿಸಿರುವ ಅವರ ಕಾರ್ಯಶೈಲಿಯನ್ನು ನಾನು ಅಭಿನಂದಿಸುತ್ತೇನೆ. ಅವರು ತುಂಬಾ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರತ್ತ ಯಾರೊಬ್ಬರು ಬೊಟ್ಟು ಮಾಡಿ ತೋರಿಸುವಂತಿಲ್ಲ ಎಂದು ಲೋಕಸಭೆ ಕೊನೆಯ ಅಧಿವೇಶನದ ಕಲಾಪದಲ್ಲಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋನಿಯಾ ಗಾಂಧಿ ಅವರ ಬಲಭಾಗದಲ್ಲಿ ನಿಂತು ಮುಲಾಯಂ ಅವರು ಭಾಷಣ ಮಾಡುತ್ತಿದ್ದು, ತಮ್ಮ ಬಗ್ಗೆ ಹೊಗಳಿಕೆ ಮಾತನ್ನಾಡಿ, ಅಭಿನಂದಿಸಿರುವುದಕ್ಕೆ ಕುಳಿತಲ್ಲಿಂದಲ್ಲಿಯೇ ಪ್ರಧಾನಿ ಮೋದಿ ಅವರು ಮುಲಾಯಂಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next