Advertisement

ಭಾರತದ ಅಖಂಡತೆಗೆ ಹೋರಾಡಿದ ಧೀರ ನಾಯಕ ಮುಖರ್ಜಿ : ರವೀಶ ತಂತ್ರಿ

12:09 AM Jun 25, 2019 | Sriram |

ಕಾಸರಗೋಡು: ರಾಜಕೀಯ ಲಾಭಕ್ಕಾಗಿ ಭಾರತವನ್ನು ವಿಭಜಿಸುವ ರಾಜಕೀಯ ಪಕ್ಷಗಳ ವಿರುದ್ಧ ಒಂದೇ ದೇಶ, ಒಂದೇ ಧ್ವಜ, ಒಂದೇ ವ್ಯವಸ್ಥೆ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಿದ ಧೀರ ನಾಯಕರಾಗಿದ್ದರು ಭಾರತೀಯ ಜನಸಂಘದ ಸ್ಥಾಪಕ ಡಾ| ಶ್ಯಾಮ್‌ ಪ್ರಸಾದ್‌ ಮುಖರ್ಜಿ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಹೇಳಿದರು.


Advertisement

ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆದ ಡಾ| ಮುಖರ್ಜಿ ಅವರ 66ನೇ ಸಂಸ್ಮರಣೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಮಾಜ ಅನುಕರಿಸಬೇಕಾಗಿರುವುದು ಅನೀತಿಯ ವಿರುದ್ಧ ಹೋರಾಡಿದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಜೀವನ ಆದರ್ಶ ವಾಗಿದೆ. ಭಾರತದ ಅಖಂಡತೆಗಾಗಿ ಅವರು ತನ್ನ ಪ್ರಾಣವನ್ನೇ ಮುಡುಪಾಗಿ ಟ್ಟಿದ್ದರು. ಕೊನೆ ಉಸಿರು ಎಳೆಯುವಾಗಲೂ ಒಂದೇ ನೀತಿ ಜಾರಿಯಾಗಬೇಕೆಂಬ ಆಗ್ರಹ ಮಾತ್ರವೇ ಅವರಿಗಿದ್ದುದಾಗಿ ರವೀಶ ತಂತ್ರಿ ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಮೇಶ್‌ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಸವಿತಾ ಟೀಚರ್‌, ಸದಾನಂದ ರೈ, ಕೌನ್ಸಿಲರ್‌ಗಳಾದ ಉಮಾ ಕಡಪ್ಪುರ, ಜಾನಕಿ, ಕೆ.ಜಿ.ಮನೋಹರನ್‌, ಅರುಣ್‌ ಕುಮಾರ್‌ ಶೆಟ್ಟಿ, ದುಗ್ಗಪ್ಪ, ನಗರಸಭಾ ಸಮಿತಿ ಅಧ್ಯಕ್ಷ ಗುರುಪ್ರಸಾದ್‌ ಪ್ರಭು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next