Advertisement

ಹೂ ತೇರು ನಿರ್ಮಾಣಕ್ಕೆ ಮುಹೂರ್ತ

03:10 AM Jul 03, 2017 | Team Udayavani |

ನಗರ: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಹೂ ತೇರು ನಿರ್ಮಾಣಕ್ಕೆ ಮುಹೂರ್ತ ನಡೆಯಿತು. ಜಾತ್ರೆಯ ಸಂದರ್ಭ ದೇಗುಲದ ಅಂಗಣದಲ್ಲಿ ಎಳೆಯಲ್ಪಡುವ ಹೂ ತೇರು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ನೂತನ ರಥ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳಲಾಗಿತ್ತು. ದೇವಾಲಯದಲ್ಲಿ ಪ್ರಾರ್ಥನೆಯ ಅನಂತರ ಶಿಲ್ಪಿ ನಾರಾಯಣ ಆಚಾರ್ಯ ಅವರು ಹೂ ತೇರು ನಿರ್ಮಾಣಕ್ಕೆ ಚಾಲನೆ ನೀಡಿದರು.

Advertisement

ಈ ಸಂದರ್ಭ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ್‌ ಶೆಟ್ಟಿ, ಸಮಿತಿ ಸದಸ್ಯರಾದ ಕರುಣಾಕರ ರೈ, ಸಂಜೀವ ನಾಯಕ್‌ ಕಲ್ಲೇಗ, ನಯನಾ ರೈ, ಜಾನು ನಾಯ್ಕ, ರೋಹಿಣಿ ಆಚಾರ್ಯ, ಯು.ಪಿ. ರಾಮಕೃಷ್ಣ, ಪ್ರಧಾನ ಅರ್ಚಕ ವಸಂತ ಕೆದಿಲಾಯ, ದೇಗುಲ ಕಚೇರಿ ವ್ಯವಸ್ಥಾಪಕ ಜಗದೀಶ್‌, ಶಿಲ್ಪಿ ಹರೀಶ್‌ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next