Advertisement

ಮೂಡಿಗೆರೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಫೈಟ್; ಶಾಸಕರ ವಿರುದ್ಧ ಬಂಡಾಯದ ಸಭೆ

03:10 PM Mar 15, 2023 | Team Udayavani |

ಚಿಕ್ಕಮಗಳೂರು: ಮೂಡಿಗೆರೆ ಬಿಜೆಪಿಯಲ್ಲಿ ಬಣ ರಾಜಕೀಯ ಮುಂದುವರಿದಿದ್ದು ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸ್ವಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Advertisement

ಕುಮಾರಸ್ವಾಮಿ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವಂತೆ ಒಂದು ಗುಂಪು ಒತ್ತಾಯ ಮಾಡುತ್ತಿದ್ದು, ಮತ್ತೊಂದು ಗುಂಪು ಶಾಸಕ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡುತ್ತಿದೆ.

ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಫೈಟ್ ತೀವ್ರವಾಗಿದ್ದು, ನಾಳೆ ಮೂಡಿಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದ್ದು ಅಸಮಾಧಾನ ಸ್ಟೋಟವಾಗುತ್ತದೋ ಅನ್ನುವ ಅನುಮಾನಗಳು ದಟ್ಟವಾಗಿದೆ. ಯಾತ್ರೆಯಲ್ಲಿ ಎಂ. ಪಿ.ಕುಮಾರಸ್ವಾಮಿ ವಿರುದ್ದ ಬ್ಯಾನರ್ ಪ್ರದರ್ಶನ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯ ಸಂಕಲ್ಪಯಾತ್ರೆ ಅಂಗವಾಗಿ ಮಧ್ಯಾಹ್ನ ರೋಡ್ ಶೋ ಮುನ್ನ ಮೂಡಿಗೆರೆ ಪಟ್ಟಣದ ಖಾಸಗಿ ಹೋಟೇಲ್ ನಲ್ಲಿ ಬಂಡಾಯ ಗುಂಪಿನಿಂದ ಪ್ರತ್ಯಕ ಸಭೆ ನಡೆಸಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಬಂಡಾಯದ ಸಭೆಗೆ ಕರೆದಿರುವ ಆಡಿಯೋ, ಪೋಸ್ಟ್ ವೈರಲ್ ಆಗಿವೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದ್ದು ಬಣ ರಾಜಕೀಯ ಬೀದಿಗೆ ಬರುತ್ತದೆಯೋ ಎನ್ನುವ ಆತಂಕ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next