Advertisement

ಮೂಡಿಗೆರೆ: ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ : ಆರು ಮಂದಿ ಬಂಧನ, ನಗದು ವಶ

12:49 PM Aug 18, 2022 | Team Udayavani |

ಚಿಕ್ಕಮಗಳೂರು : ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸ್ ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಚಂದುವಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಚಂದುವಳ್ಳಿ ಗ್ರಾಮದ ನಿವಾಸಿಗಲಾದ ಡೇವಿಡ್ , ರವಿ , ಗಬ್ಗಲ್  ಗ್ರಾಮದ ನಿವಾಸಿ ದೇಜು , ಜಾವಳಿ ಗ್ರಾಮದ ನಿವಾಸಿ ರತ್ನಾಕರ, ಕೆಳ ಮರ್ಕಲ್  ಗ್ರಾಮದ ನಿವಾಸಿ ಸುಧಾಕರ , ಗಬ್ಗಲ್  ಗ್ರಾಮದ ಸತೀಶ್ ಬಂಧಿತ ಆರೋಪಿಗಳು.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ 3,500ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಬಿಎಸ್‌ವೈ ಜಪ; ರಾಜಕಾರಣದ ಲೆಕ್ಕಾಚಾರ ಬದಲಾಗುವ ಸಾಧ್ಯತೆ

ಕಾರ್ಯಾಚರಣೆ ಯಲ್ಲಿ ಬಾಳೂರು ಠಾಣೆಯ ಪಿ.ಎಸ್.ಐ. ಪವನ್ ಕುಮಾರ್ ಸಿ.ಸಿ.,  ಹೇಮಂತ್, ಮನು, ಮಂಜುನಾಥ್, ಜಾಫರ್, ಸತೀಶ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next