Advertisement

ಅಂತರಂಗ ಶುದ್ಧಿಯ ತಪ್ತ ಮುದ್ರಾಧಾರಣೆ

03:30 AM Jul 05, 2017 | Karthik A |

ನಗರ: ಅಂತರಂಗ ಶುದ್ಧಿಯ ಸಂಕೇತದ ತಪ್ತ ಮುದ್ರಾಧಾರಣೆ ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಎರಡೂ ದೇವಾಲಯಗಳಲ್ಲಿ ಭಕ್ತರಿಗೆ ಮುದ್ರಾಧಾರಣೆ ಮಾಡಿದರು. ನೂರಾರು ಮಂದಿ ಭಕ್ತರು ಪಾಲ್ಗೊಂಡು ಶಂಖ, ಚಕ್ರಗಳ ಮೊಹರು ಹಾಕಿಸಿಕೊಂಡರು. ದೌರ್ಬಲ್ಯ ಹಾಗೂ ಇತರ ಕಾರಣಗಳಿಂದ ಮೈಲಿಗೆಯಾದ ದೇಹವನ್ನು ಮುದ್ರೆ ಹಾಕಿಸಿಕೊಳ್ಳುವ ಮೂಲಕ ಶುದ್ಧವಾಗಿಸಿಕೊಳ್ಳುವ ನಂಬಿಕೆ ಈ ಸಂಪ್ರದಾಯದಲ್ಲಿದೆ. ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು, ನೂರಾರು ಮಂದಿ ಭಕ್ತಾದಿಗಳು ತಪ್ತಮುದ್ರಾಧಾರಣೆ ಕಾರ್ಯಕ್ರಮ ಸಾಕ್ಷಿಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next