Advertisement

Mudhol;ಮುಂದುವರಿದ ಕಾರ್ಯಾಚರಣೆ; ಕಳ್ಳಭಟ್ಟಿ ಕೇಂದ್ರದ‌ ಮೇಲೆ ದಾಳಿ‌ ಮಾಡಿದ ಅರಣ್ಯ ಇಲಾಖೆ

05:06 PM Aug 19, 2024 | Team Udayavani |

ಮುಧೋಳ: ಯಡಹಳ್ಳಿ‌ ಚೀಂಕಾರ ರಕ್ಷಿತಾರಣ್ಯದಲ್ಲಿ‌ನ ಕಳ್ಳಭಟ್ಟಿ‌ ಕೇಂದ್ರಗಳ ಮೇಲಿನ ದಾಳಿಯನ್ನು ಮುಂದುವರಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ನಾಲ್ಕು ಕಡೆಗಳಲ್ಲಿ‌ ದಾಳಿ‌ ನಡೆಸಿ ಕಳ್ಳಭಟ್ಟಿ ತಯಾರಿಕೆಯ ಪರಿಕರಗಳನ್ನು‌ ನಾಶಪಡಿಸಿದ್ದಾರೆ.

Advertisement

ಆ.16ರಂದು ಉದಯವಾಣಿಯಲ್ಲಿ ಪ್ರಕಟಗೊಂಡಿದ್ದ ಚೀಂಕಾರ‌ ರಕ್ಷಿತಾರಣ್ಯಕ್ಕೆ ಕಳ್ಳಕಾಕರ ಕಾಕದೃಷ್ಟಿಯೆಂಬ ತಲೆಬರಹ‌ದ ವಿಸ್ತೃತ ವರದಿಯಿಂದ‌ ಎಚ್ಚೆತ್ತು ದಾಳಿ ನಡೆಸುತ್ತಿರುವ ಅರಣ್ಯ ಇಲಾಖೆ‌ ಸಿಬ್ಬಂದಿ ವರದಿ ಪ್ರಕಟಗೊಂಡ ದಿನದಂದೇ ಮೂರುಕಡೆಗಳಲ್ಲಿ‌ ದಾಳಿ ನಡೆಸಿ ಅಪಾರ ಪ್ರಮಣದ ಕಳ್ಳಭಟ್ಟಿ‌ ಪರಿಕರಗಳನ್ನು ನಾಶಪಡಿಸಿತ್ತು. ದಾಳಿಯ ಮುಂದುವರಿದ ಭಾಗವಾಗಿ ಸೋಮವಾರ ನಾಲ್ಕು ಕಡೆಗಳಲ್ಲಿ ದಾಳಿ‌ ನಡೆಸಿ‌ ಕಳ್ಳಭಟ್ಟಿ‌ ಕೇಂದ್ರಗಳನ್ನು‌ ನಾಶಪಡಿಸಿದ್ದಾರೆ.

ಡಿಎಫ್ಓ ಸಿ.ಜೆ.ಮಿರ್ಜಿ,‌ ಎಸಿಎಫ್ ಹಾಗೂ ವಲಯ ಅರಣ್ಯಾಧಿಕಾರಿ ಎಚ್.ಬಿ‌. ಡೋಣಿ‌‌ ಮಾರ್ಗದರ್ಶನದಲ್ಲಿ‌‌ ನಡೆದ‌ ದಾಳಿ‌ ಕಾರ್ಯಾಚರಣೆಯಲ್ಲಿ‌ ಉಪ‌ವಲಯ ಅರಣ್ಯಾಧಿಕಾರಿ‌ ರಮೇಶ ಮೆಟಗುಡ್ಡ, ಗಸ್ತು ಅರಣ್ಯಪಾಲಕರಾದ‌ ಶಿವರಾಜ‌ ಸಜ್ಜನ, ಚಂದ್ರಶೇಖರ‌‌‌ ಉಪ್ಪಾರ, ಆನಂದ ಸಾಗರ, ಗುರಪ್ಪ‌ ಬಾಗೇವಾಡಿ ಹಾಗೂ ವಾಚರ್ ಗಳಾದ ಹನಮಂತ ತಳವಾರ, ಈರಪ್ಪ ಕೋಲೂರ, ತಿಪ್ಪಣ್ಣ ವಾಬನ್ನವರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next