Advertisement

ಕೋವಿಡ್ ವೈರಸ್‌ ತಡೆಗೆ ಜಾಗೃತಿ ವಹಿಸಿ

05:39 PM May 04, 2020 | Team Udayavani |

ಮುಧೋಳ: ಗ್ರಾಮೀಣ ಭಾಗದಲ್ಲಿ ಕೋವಿಡ್ ವೈರಸ್‌ ಇಲ್ಲ. ಇದೇ ಸುಂದರ ವಾತಾವರಣ ಮುಂದುವರಿಯಲು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ- ಹಾಲಿ ನಿರ್ದೇಶಕ ರಾಮಣ್ಣ ತಳೇವಾಡ ಹೇಳಿದರು.

Advertisement

ತಾಲೂಕಿನ ಜಂಬಗಿ ಕೆ.ಡಿ ಗ್ರಾಮದಲ್ಲಿ ತಾಲೂಕಿನ 46 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ 5 ಲೀಟರ್‌ ಉಚಿತ ಸ್ಯಾನಿಟೈಜರ್‌ ಹಾಗೂ ತಲಾ 20 ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು. ತಾಲೂಕಿನ ಎಲ್ಲ ಪಿಕೆಪಿಎಸ್‌ಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಉಚಿತ ಸ್ಯಾನಿಟೈಜರ್‌ ಮತ್ತು ಮಾಸ್ಕ್ ನೀಡಲಾಗುತ್ತಿದೆ. ಸಂಘಗಳಿಗೆ ನೂರಾರು ಗ್ರಾಹಕರು, ರೈತರು ಬರುತ್ತಿದ್ದು, ಅವರಿಗೆ ಕೊರೊನಾ ಕುರಿತು ತಿಳಿವಳಿಕೆ ಹೇಳುವ ಜತೆಗೆ ಸಿಬ್ಬಂದಿ ಕೂಡ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್‌ ಅಧಿ ಕಾರಿಗಳಾದ ಆರ್‌.ಎಂ. ಕೋಮಾರ ಹಾಗೂ ಟಿ.ವಿ. ಅರಳಿಕಟ್ಟಿ ಮಾತನಾಡಿ, ತಾಲೂಕಿನ 46 ಪಿಕೆಪಿಎಸ್‌ ಸಿಬ್ಬಂದಿಯಿಂದ ಕೊರೊನಾ ತಡೆಗಟ್ಟಲು ವ್ಯಾಪಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪಿಕೆಪಿಎಸ್‌ ಅಧ್ಯಕ್ಷ ಚಿದಾನಂದ ಪಂಚಗಟ್ಟಿಮಠ, ಶಿವನಗೌಡ ನಾಡಗೌಡ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಿವನಗೌಡ ನಾಡಗೌಡ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next