Advertisement

Koppala; ಪೂಜಾರ ಕುಟುಂಬದ ನವ ವಧು – ವರರಿಂದ ಮತದಾನ ಜಾಗೃತಿ

05:13 PM Apr 04, 2024 | Team Udayavani |

ಕೊಪ್ಪಳ: ತಾಲೂಕಿನ ಹಾದರಮಗ್ಗಿ ಗ್ರಾಮದ ಪೂಜಾರ ಕುಟುಂಬದ ಸಹೋದರರ ವಿವಾಹ ಸಮಾರಂಭವು ಇಲ್ಲಿನ ಭಾಗ್ಯನಗರದ ಬಾಲಾಜಿ ಪಂಕ್ಷನ್‌ ಹಾಲ್ ನಲ್ಲಿ ಜರುಗಿತು.

Advertisement

ವಿವಾಹ ಸಮಾಂಭದಲ್ಲಿ ನವ ವಧು-ವರರು ಮೇ-7ರಂದು ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ವೇದಿಕೆಯಲ್ಲಿ ನಮ್ಮ ಮತ, ನಮ್ಮ ಹಕ್ಕು, ಪ್ರತಿ ಮತ ಅತ್ಯಮೂಲ್ಯ ತಪ್ಪದೇ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮತ ಚಲಾಯಿಸೋಣ ಪ್ರಜಾಪ್ರಭುತ್ವ ಗಟ್ಟಿಗೊಳಿಸೊಣ ಇತ್ಯಾದಿ ಘೋಷಣೆಗಳನ್ನು ಒಳಗೊಂಡ ಬಂಟಿಂಗ್ಸ್‌ ಮೂಲಕ ಮತದಾನ ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ದುಂಡಪ್ಪ ತುರಾದಿ ಅವರು ನವ ವಧು ವರರಿಗೆ ಅಕ್ಷತೆ ಹಾಕಿ ಶುಭ ಕೋರಿದರಲ್ಲದೆ ಕಡ್ಡಾಯವಾಗಿ ಮೇ-7ರಂದು ತಪ್ಪದೇ ಮತ ಚಲಾಯಿಸಿರೆಂದು ಪೂಜಾರ ಕುಟುಂಬದವರಿಗೆ ಹಾಗು ಹಾಜರಿದ್ದವರಿಗೆ ಕರೆ ನೀಡಿದರು.

ತಾಪಂ ಐಇಸಿ ಸಂಯೋಜಕರು, ಕಿನ್ನಾಳ ಪಂಚಾಯತ್ ಅಭಿವೃದ್ದಿ ಅಧಿಕಾರಿ, ತಾಲೂಕ ಸ್ವೀಪ್‌ ಸಮಿತಿಯ ಸದಸ್ಯರು, ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next