Advertisement

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

08:44 PM Jul 21, 2024 | Team Udayavani |

ಮುಧೋಳ : ಬೆಳಗಲಿ ತೋಟದ ಶೆಡ್ ನಲ್ಲಿ ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾಯಿ ಮಗಳ ಸಜೀವ ದಹನ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ಥಳ ಮಹಜರು ವೇಳೆ ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಭಂಡತನ ತೋರಿದ್ದಾನೆ. ಭಾನುವಾರ ಮಹಾಲಿಂಗಪುರದಲ್ಲಿ ಸ್ಥಳ ಮಹಜರು ನಡೆಸುವ ವೇಳೆ ಅಪಾರ ಜನ ಸೇರಿದ್ದರು. ಈ ವೇಳೆ ಆರೋಪಿ ಅಮೀನ ಸಾಬ್ ಪೆಂಡಾರಿ ಜನರ ಕಡೆ ಕೈ ಮಾಡಿ‌ ನಗೆ ಬೀರಿ ಪೋಸ್ ನೀಡಿದ್ದಾನೆ.

Advertisement

ನಾನೆ ಎಂಬರ್ಥದಲ್ಲಿ ಎದೆ ತಟ್ಟಿಕೊಂಡು ಕೈ ಮಾಡಿ ದುರುಳತನ ತೋರಿದ್ದಾನೆ. ಕೃತ್ಯಕ್ಕೆ ಹೆಚ್ ಪಿ ಮೋಟರ್, ಪೈಪ್ ಖರೀದಿ ಮಾಡಿದ್ದ ಅಂಗಡಿಗೆ  ಸ್ಥಳ ಮಹಜರು ಮಾಡಲು ಮುಧೋಳ ಪೊಲೀಸರು ಕರೆತಂದಿದ್ದ ವೇಳೆ ಈ ಘಟನೆ ನಡೆದಿದೆ.

ಮುಧೋಳ ತಾಲೂಕಿನ ಬೆಳಗಲಿಯಲ್ಲಿ ಜುಲೈ 16 ರಂದು ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ಹಾಕಿ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿದ್ದರು. ಜೈಬಾನ ಪೆಂಡಾರಿ (60), ಶಬಾನ ಪೆಂಡಾರಿ (20) ಕೊಲೆಯಾಗಿದ್ದರು. ಅವಘಡದಲ್ಲಿ ಸಿದ್ದಿಕ್ಕಿ ಎಂಬಾತ ಬಚಾವಾಗಿದ್ದು, ಗಾಯಗೊಂಡಿದ್ದ ಸುಬಾನ್ (27)ಚಿಕಿತ್ಸೆ ಫಲಿಸದೆ‌ ಎರಡು ದಿನದ ನಂತರ ಮೃತಟ್ಟಿದ್ದ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next