Advertisement

Mudhol: ಕಲುಷಿತ ನೀರಿನೊಂದಿಗೆ ಪ.ಪಂ. ಕಚೇರಿ ಎದುರು ಧರಣಿ- ಬೀಗ ಜಡಿದು ಪ್ರತಿಭಟನೆ

12:53 PM Aug 29, 2024 | Team Udayavani |

ಮುಧೋಳ: ಕಲುಷಿತ‌ ನೀರು ಪೂರೈಕೆಯಾಗುತ್ತಿರುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಅಧಿಕಾರಿಗಳು ಯಾವುದೇ ಕ್ರಮಕ್ಕೆ‌ ಮುಂದಾಗುತ್ತಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದ ಲೋಕಾಪುರ ಪಟ್ಟಣದ 1ನೇ ವಾರ್ಡ್ ನಿವಾಸಿಗಳು ಪಟ್ಟಣ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೆಲ ದಿನಗಳಿಂದ ಪ.ಪಂ. ‌ನಿಂದ ಕಲುಷಿತ ನೀರು ಪೂರೈಸಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಪ.ಪಂ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಶುದ್ದ ಕುಡಿವ ನೀರು ಪೂರೈಸಬೇಕು ಎಂದು ಒತ್ತಾಯಿಸದರು.

2 ಗಂಟೆ ಕಾದರೂ ಅಧಿಕಾರಿಗಳ ಸುಳಿವಿಲ್ಲ: ಹಲವು ದಿನಗಳಿಂದ ಪೂರೈಕೆಯಾಗುತ್ತಿರುವ ಕಲುಷಿತ ನೀರಿನ ಸಮಸ್ಯೆ‌ ಸರಿಡಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಆ.29ರ ಗುರುವಾರ ಬೆಳಗ್ಗೆ ವಾರ್ಡ್ ನಿವಾಸಿಗಳು ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ಮುಂದಾದರು‌. ಆದರೆ ಬೆಳಗ್ಗೆ 11ಗಂಟೆಯಾದರೂ ಸಂಬಂಧಿಸಿದ ಅಧಿಕಾರಿಗಳು ಕಚೇರಿಗೆ ಆಗಮಿಸದ ಕಾರಣ ನಿವಾಸಿಗಳ ಆಕ್ರೋಶ ಮತ್ತಷ್ಟು ಹೆಚ್ಚಾಯಿತು. ಅಧಿಕಾರಿಗಳ ನಿರ್ಲಕ್ಷದಿಂದ ಜನರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ನಾನು ಜಿಲ್ಲಾಧಿಕಾರಿಗಳ‌ ವಿಡಿಯೋ‌ ಕಾನ್ಫರೆನ್ಸ್ ಸಭೆಯಲ್ಲಿದ್ದೆ. ಪ್ರತಿಭಟನೆ ಸುದ್ದಿ ತಿಳಿದ ಕೂಡಲೇ ಸಭೆಯಿಂದ ಅನುಮತಿ‌ ಪಡೆದು ಬಂದು‌‌‌ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ್ದೇನೆ. ಸಂಬಂಧಿಸಿದ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಕೂಡಲೇ ಬಗೆಹರಿಸಿ ಎಂದು ಸೂಚಿಸಿದ್ದೇನೆ. –ಜ್ಯೋತಿ ಉಪ್ಪಾರ ಪ.ಪಂ ಮುಖ್ಯಾಧಿಕಾರಿ‌, ಲೋಕಾಪುರ

Advertisement

Udayavani is now on Telegram. Click here to join our channel and stay updated with the latest news.

Next