Advertisement

Escape; ಸೆರೆಸಿಕ್ಕ ಚಿರತೆ ತಪ್ಪಿಸಿಕೊಂಡಿತು!!: ಮತ್ತೆ ಬೋನಿಗೆ

07:21 PM Jul 24, 2024 | Team Udayavani |

ಮುಧೋಳ : ಸಮೀಪದ ಕಿಶೋರಿ ಭಾಗದಲ್ಲಿ ಕೆಲದಿನಗಳಿಂದ ಹಿಂದೆ ಓಡಾಡುತ್ತ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬಂದಿ ಸೋಮವಾರ ಯಶಸ್ವಿಯಾದರು. ಭಾರೀ ಕಾರ್ಯಾಚರಣೆ ನಡೆಸಿದ ಬಳಿಕ ಜನರು ನಿಟ್ಟುಸಿರು ಬಿಡಬೇಕು ಅನ್ನುವಷ್ಟರಲ್ಲಿ ಬೋನಿನಿಂದ ತಪ್ಪಿಸಿಕೊಂಡಿತು.

Advertisement

ಕಿಶೋರಿ ಹತ್ತಿರದ ಉಳ್ಳಾಗಡ್ಡಿ ಸ್ಟಾಪ್ ಹತ್ತಿರದ ಕಬ್ಬಿನ ಗದ್ದೆಯಲ್ಲಿದ್ದ ಚಿರತೆಯನ್ನು ಸಾರ್ವಜನಿಕರ ಸಹಕಾರದಿಂದ ಅರಣ್ಯ ಇಲಾಖೆ ಸಿಬಂದಿ ಸೆರೆಹಿಡಿದರಾದರೂ ಬೋನಿನಲ್ಲಿ ಸೂಕ್ತವಾಗಿ ಬಂಧಿಸಿಡಲಿಲ್ಲ. ಟ್ರ್ಯಾಕ್ಟರ್ ಗೆ  ಏರಿಸಿ ಸುರಕ್ಷಿತ ಅರಣ್ಯಕ್ಕೆ ಬಿಡಲೆಂದು ಒಯ್ಯುತ್ತಿದ್ದಾಗ ಮತ್ತೆ ಕಬ್ಬಿನ ಗದ್ದೆಗೆ ಹಾರಿ ಪರಾರಿಯಾಯಿತು. ಮತ್ತೆ ಕಾರ್ಯಾಚರಣೆಗಿಳಿದ ರೈತರು, ಸ್ಥಳೀಯರು ಮತ್ತು ಅರಣ್ಯ ಸಿಬಂದಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಈಗಾಗಲೇ ಆತಂಕಕ್ಕೊಳಗಾಗಿದ್ದ ಜನತೆ ತಪ್ಪಿಸಿಕೊಂಡಾಗ ಮತ್ತಷ್ಟು ಆತಂಕಕ್ಕೊಳಗಾದರು. ಒಮ್ಮೆ ಸೆರೆ ಸಿಕ್ಕಿ ತಪ್ಪಿಸಿಕೊಂಡಿರುವ ಚಿರತೆಯನ್ನು ಮತ್ತೆ ಸೆರೆ ಹಿಡಿಯುವುದು ಮತ್ತಷ್ಟು ಸವಾಲಾಗಿ ಪರಿಣಮಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next