Advertisement

ಮುದ್ದೇಬಿಹಾಳ: ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಹುಚ್ಚು ನಾಯಿ ದಾಳಿ

02:35 PM Feb 19, 2023 | Kavyashree |

ಮುದ್ದೇಬಿಹಾಳ: ಪಟ್ಟಣದಲ್ಲಿ ಫೆ. 19 ರಂದು ನಡೆದ ಛತ್ರಪತಿ ಶಿವಾಜಿ ಮೆರವಣಿಗೆ ಸಂದರ್ಭ ಹುಚ್ಚು ನಾಯಿಯೊಂದು ಮೆರವಣಿಗೆಯಲ್ಲಿದ್ದವರ ಮೇಲೆ ದಾಳಿ ನಡೆಸಿದ್ದು 20-25 ಜನ ಗಾಯಗೊಂಡಿದ್ದಾರೆ.

Advertisement

ಮೆರವಣಿಗೆಯನ್ನು ಹಳೆ ತಹಸೀಲ್ದಾರ್ ಕಚೇರಿಯಿಂದಲೇ ಹಿಂಬಾಲಿಸಿಕೊಂಡು ಬಂದ ನಾಯಿ ಬಸವೇಶ್ವರ ವೃತ್ತಕ್ಕೆ ಬರುತ್ತಿದ್ದಂತೆಯೇ ಹುಚ್ಚು ಕೆರಳಿ ಸಿಕ್ಕಸಿಕ್ಕವರ ಕಾಲನ್ನು ಕಚ್ಚಿದೆ.

ಮೆರವಣಿಗೆಯಲ್ಲಿ ಡಿಜೆ ಸೌಂಡಿಗೆ ಕುಣಿಯುತ್ತಿದ್ದ ಹುಡುಗನೊಬ್ಬನ ಮೇಲೆ ತೀವ್ರ ದಾಳಿ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡವರೆಲ್ಲ ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎಲ್ಲರಿಗೂ ರೇಬಿಸ್ ಗೆ ನೀಡುವ ಇಂಜೆಕ್ಷನ್, ಮಾತ್ರೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ‌

ಸಧ್ಯ ನಾಪತ್ತೆಯಾಗಿರುವ ಹುಚ್ಚು ನಾಯಿಗಾಗಿ ಜನ ಹುಡುಕಾಟ ನಡೆಸುತ್ತಿದ್ದಾರೆ. ನಾಯಿ ಸಿಗುವವರೆಗೂ ಸಾರ್ವಜನಿಕರು ಮಕ್ಕಳನ್ನು ಬೀದಿಗೆ ಬಿಡದಂತೆ, ತಾವೂ ಜಾಗೃತರಾಗಿರುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next