Advertisement

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ

05:25 PM Sep 16, 2024 | Poornashri K |

ಮುದ್ದೇಬಿಹಾಳ: ಕೃಷ್ಣಾ ನದಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಬಾಳವ್ವ ಕಮರಿ (19) ಘಟನೆಯ ಸಂಬಂಧಿಸಿದಂತೆ ಇಂಗಳಗಿ ಟಕ್ಕಳಕಿ ಗ್ರಾಮ ವ್ಯಾಪ್ತಿಯ ನದಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.

Advertisement

ಘಟನಾ ಸ್ಥಳದಿಂದ ಸುಮಾರು 15 ಕಿ.ಮೀ ಅಂತರದಲ್ಲಿರುವ ಇಂಗಳಗಿ ಟಕ್ಕಳಕಿ ಗ್ರಾಮ ವ್ಯಾಪ್ತಿಯ ನದಿಯಲ್ಲಿ ಮುಳ್ಳುಕಂಟಿಗೆ ಸಿಕ್ಕಿಹಾಕಿಕೊಂಡಿದ್ದ ಶವವನ್ನು ಮುದ್ದೇಬಿಹಾಳ ಅಗ್ನಿಶಾಮಕ ದಳದ ಸಿಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಚಟ್ಟಿಹಾಳದಿಂದ ಆಗಮಿಸಿದ್ದ ಮೃತಳ ಬಂಧುಗಳೂ ಸೇರಿ ಹಲವರು ನದಿ ದಂಡೆಯಲ್ಲೇ ಬೀಡು ಬಿಟ್ಟು ಶವಕ್ಕಾಗಿ ನಿರಂತರ ಪ್ರಯತ್ನ ನಡೆಸಿದ್ದರು.

ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸುವುದಾಗಿ ಮುದ್ದೇಬಿಹಾಳ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next