Advertisement

ಮುದ್ದೇಬಿಹಾಳ: ಸಾಲದ ಬಾಧೆ ತಾಳಲಾರದೆ ನೇಕಾರ ಆತ್ಮಹತ್ಯೆ

10:15 PM Oct 07, 2022 | Vishnudas Patil |

ಮುದ್ದೇಬಿಹಾಳ : ಸಾಲದ ಬಾಧೆ ತಾಳದೇ ಮನನೊಂದು ತಮ್ಮದೇ ಜಮೀನಿನಲ್ಲಿ ನೇಣು ಬಿಗಿದುಕೊಂಡು ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಶಿರೋಳ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

Advertisement

ಶಿರೋಳ ಗ್ರಾಮದ ದಾನಪ್ಪ ಮಲಕಾಜಪ್ಪ ಹೆಬ್ಬಾಳ(45) ಆತ್ಮಹತ್ಯೆಗೆ ಶರಣಾಗಿರುವ ನೇಕಾರ.ಜಮೀನಿನಲ್ಲಿ ಹಾಕಿದ್ದ ಸಜ್ಜೆ ಬೆಳೆ ರಾಶಿ ಮಾಡುವ ಮುಂಚೆ ಮಳೆ ಬಂದು ಹಾನಿಯಾಗಿತ್ತು.ಅಲ್ಲದೇ ನೇಕಾರಿಕೆಯಲ್ಲೂ ಅಷ್ಟೊಂದು ಆದಾಯ ಇಲ್ಲದ್ದರಿಂದ ಅವರಿವರ ಬಳಿ ಮಾಡಿಕೊಂಡಿದ್ದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರ ನೀಡಲು ಅಗ್ರಹ
ನೇಕಾರ ಕುಟುಂಬದ ವ್ಯಕ್ತಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಹಿನ್ನೆಲೆಯಲ್ಲಿ ಸರಕಾರ ತಕ್ಷಣ ಆತನ ಕುಟುಂಬದ ನೆರವಿಗೆ ಬರಬೇಕು.ಪರಿಹಾರಧನ ಬಿಡುಗಡೆ ಮಾಡಬೇಕು ಎಂದು ನೇಕಾರ ಪರ ಸಂಘಟನೆಗಳು ಆಗ್ರಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next