Advertisement

ಮುದಗಲ್ಲ: ಗ್ರಾಮೀಣ ಕ್ರೀಡೆ ಉಳಿಸಿ-ಬೆಳೆಸಿ

05:40 PM Aug 25, 2022 | Team Udayavani |

ಮುದಗಲ್ಲ: ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿವೆ. ಅವುಗಳ ಉಳಿಸಿ, ಬೆಳೆಸುವ ಕೆಲಸವಾಗಬೇಕಿದೆ ಎಂದು ಬಿಜೆಪಿ ತಾಲೂಕು ಮಂಡಳ ಅಧ್ಯಕ್ಷ ವೀರನಗೌಡ ಲಕ್ಕಿಹಾಳ ಹೇಳಿದರು.

Advertisement

ಪಟ್ಟಣದ ಮೇಗಳಪೇಟೆಯ ಗ್ಯಾನಪ್ಪಯ್ಯನ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಿಂಗ್ರಾಣಿ ಕಲ್ಲು ಮತ್ತು ಗುಂಡು ಎತ್ತುವ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಗ್ಯಾನಪ್ಪಯ್ಯನ ಜಾತ್ರೆಯಲ್ಲಿ ಗ್ರಾಮೀಣ ಸೋಗಡಿನ ಟಗರಿನ ಕಾಳಗ, ಕಬಡ್ಡಿ, ಸಿಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ರಾಸುಗಳು ಭಾರ ಏಳೆಯುವ ಸ್ಪರ್ಧೆಗಳನ್ನು ನಡೆಸುತ್ತಿರುವುದು ಇಲ್ಲಿನ ಭಕ್ತರ ಮಹತ್ವದ ಕೆಲಸವಾಗಿದೆ ಎಂದರು.

ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಸಹೋದರ ಕರಿಯಪ್ಪ ವಜ್ಜಲ್‌ ಕಾರ್ಯಕ್ರಮ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದೊಡ್ಡ ಸಿದ್ದಾಯ್ಯ ಹೊರಪೇಟೆ, ಅಯ್ಯಪ್ಪಯ್ಯ ಗ್ಯಾನಪ್ಪಯ್ಯನವರ್‌, ಮಂಜುನಾಥ ಬನ್ನಿಗೋಳಕರ್‌, ಮಹ್ಮದ್‌ ರಫಿ, ಕರಿಯಪ್ಪ, ಸಣ್ಣ ಸಿದ್ದಯ್ಯ, ಗ್ಯಾನಪ್ಪ, ಗಂಗಪ್ಪ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next