Advertisement

MUDA; ಸಿಎಂ ವಿಚಾರಣೆಗೆ ರಾಜ್ಯಪಾಲರು ಒಪ್ಪಿಗೆ ಕೊಡುವರೇ: ಕುತೂಹಲ

01:21 AM Aug 04, 2024 | Team Udayavani |

ಬೆಂಗಳೂರು: ಮುಡಾ ಪ್ರಕ ರಣಕ್ಕೆ ಸಂಬಂಧಿಸಿ ಸರಕಾರ ಹಾಗೂ ರಾಜಭವನದ ನಡುವಣ ಸಂಘರ್ಷ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾ ಚಾರ ಆರೋಪ ಸಂಬಂಧ ಅಭಿಯೋಜನೆಗೆ ಸಮ್ಮತಿ ನೀಡುವ ವಿಷಯದಲ್ಲಿ ರಾಜ್ಯಪಾಲರು ಸೋಮವಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement

ದಿಲ್ಲಿಯಲ್ಲಿ ರಾಜ್ಯಪಾಲರ ಸಮ್ಮೇಳನ ದಲ್ಲಿ ಭಾಗಿಯಾಗಲು ತೆರಳಿದ್ದ ಅವರು ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಿದ್ದು, ಅಭಿಯೋಜನೆಗೆ ಸಮ್ಮತಿ ನೀಡುವುದರಿಂದ ಆಗುವ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಭಿಯೋಜನೆಗೆ ಅನುಮತಿ ನೀಡುವಾಗ ಸಚಿವ ಸಂಪುಟದ ನಿರ್ಣಯ ಪಾಲಿಸಬೇಕೆಂಬ ಸರಕಾರದ ವಾದ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡೆ ರಾಜಭವನದ ಕೆಂಗಣ್ಣಿಗೆ ಗುರಿಯಾಗಿದ್ದು, ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಂತೆ ಅವರು ನಿರ್ಧಾರ ತೆಗೆದುಕೊಳ್ಳುವುದು ನಿಚ್ಚಳವಾಗಿದೆ. ರಾಜ್ಯ ಪಾಲರು ರವಿವಾರ ಬೆಂಗಳೂರಿಗೆ ವಾಪಸ್‌ ಆಗುವರು ಎನ್ನಲಾಗುತ್ತಿದೆ.

ಮತ್ತೊಮ್ಮೆ ನೋಟಿಸ್‌
ಮೂಲಗಳ ಪ್ರಕಾರ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೂಂದು ಶೋಕಾಸ್‌ ನೋಟಿಸ್‌ ನೀಡುವ ಸಾಧ್ಯತೆಯೂ ಇದೆ. ಈ ಹಿಂದೆ ನೀಡಿದ ನೋಟಿಸ್‌ನ ವಿರುದ್ಧವಾಗಿ ಮಂತ್ರಿ ಪರಿಷತ್‌ ಸಭೆ ತೆಗೆದುಕೊಂಡ ನಿರ್ಣಯವೇ ಕಾನೂನುಬಾಹಿರ ಎಂದು ರಾಜ್ಯಪಾಲರು ವಾದಿಸುವ ಸಾಧ್ಯತೆ ಇದೆ. ಅದಾದ ಬಳಿಕ ಸರಕಾರದ ನಡೆ ಆಧರಿಸಿ ಅಭಿಯೋಜನೆಗೆ ಒಪ್ಪಿಗೆ ನೀಡಬಹುದು ಎನ್ನಲಾಗುತ್ತಿದೆ. ಇವೆಲ್ಲವುಗಳ ಮಧ್ಯೆ ಅಭಿಯೋಜನೆಗೆ ಒಪ್ಪಿಗೆ ನೀಡುವ ವಿಚಾರದಲ್ಲಿ ರಾಜ್ಯಪಾಲರ ವಿವೇಚನಾಧಿಕಾರವನ್ನು ಪ್ರಶ್ನಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರಕರಣದ ಸತ್ಯಾಸತ್ಯ ಆಧರಿಸಿ ನ್ಯಾಯಾಲಯದಲ್ಲಿ ಇದಕ್ಕೆ ತಡೆ ಕೋರಿ ಕಾನೂನು ಹೋರಾಟ ನಡೆಸಬಹುದೇ ವಿನಾ ಸಂವಿಧಾನಾತ್ಮಕವಾಗಿ ರಾಜ್ಯಪಾಲರ ಈ ವಿವೇಚನಾಧಿಕಾರವನ್ನು ಪ್ರಶ್ನಿಸುವುದು ಸರಕಾರದ ಕಡೆಯಿಂದ ಕಾಲಹರಣದ ತಂತ್ರ ಎಂದೇ ಕಾನೂನು ತಜ್ಞರು ವ್ಯಾಖ್ಯಾನಿಸಲಾರಂಭಿಸಿದ್ದಾರೆ.

ವೈಯಕ್ತಿಕ ಹೋರಾಟ
ಕಾನೂನು ತಜ್ಞರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವಷ್ಟೇ ರಾಜ್ಯಪಾಲರು ಅಭಿಯೋಜನೆಗೆ ಅಂಗೀಕಾರ ನೀಡಿದರೆ ಆಗ ಅವರು ವೈಯಕ್ತಿಕವಾಗಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಸರಕಾರ ಇದರ ಭಾಗವಾಗುವುದಕ್ಕೆ ಸಾಧ್ಯವಿಲ್ಲ. ಒಟ್ಟಾರೆಯಾಗಿ ಏಕಾಂಗಿಯಾಗಿ ಸಿದ್ದರಾಮಯ್ಯ ತಮ್ಮನ್ನು ಕಾನೂನು ಹೋರಾಟಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ. ಸರಕಾರದ ಮೂಲಗಳ ಪ್ರಕಾರ ಸಿದ್ದರಾಮಯ್ಯನವರು ರಾಜಭವನದ ನಡೆ ಆಧರಿಸಿ ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲೇ ಸಮರಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಿದೆ.

Advertisement

ರಾಜ್ಯಪಾಲರ ವಿವೇಚನಾಧಿಕಾರ ಸಚಿವ ಸಂಪುಟದ ನಿರ್ಣಯವನ್ನೇ ಆಧರಿಸಿರಬೇಕೆಂದಿಲ್ಲ. ಸಂಪುಟದ ಅನು ಮತಿ ಇಲ್ಲದೆ ರಾಜ್ಯಪಾಲರು ಪ್ರವರ್ತಿಸು ವುದಕ್ಕೆ ಅನೇಕ ಕಾರಣಗಳಿವೆ. ಆದರೆ ಅಭಿ ಯೋಜನೆಯನ್ನು ಪ್ರಶ್ನಿಸುವ ಹಕ್ಕು ಸಿಎಂಗೆ ಇದೆ.-ಅಶೋಕ್‌ ಹಾರ್ನಹಳ್ಳಿ,ಮಾಜಿ ಅಡ್ವೊಕೇಟ್‌ ಜನರಲ್‌

ಅಭಿಯೋಜನೆಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ರಾಜ್ಯಪಾಲರ ವಿವೇಚಾನಾಧಿಕಾರವನ್ನು ಪ್ರಶ್ನಿಸುವುದಕ್ಕೆ ಸಾಧ್ಯವೇ ಇಲ್ಲ. ಮುಖ್ಯ ಮಂತ್ರಿ ವಿರುದ್ಧ ದೂರು ಬಂದಾಗ ಅದರ ಬಗ್ಗೆ ವಿಚಾರಣೆ ಅಥವಾ ಅಭಿಯೋಜನೆಗೆ ಅನುಮತಿ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ.
-ಸಿ.ಎಚ್‌. ಹನುಮಂತರಾಯ, ಹಿರಿಯ ನ್ಯಾಯವಾದಿ

Advertisement

Udayavani is now on Telegram. Click here to join our channel and stay updated with the latest news.

Next