Advertisement

ಎಂಜಿನಿಯರ್‌ ತಲೆ ಮೇಲೆ ಕೆಸರು

12:17 PM Jul 06, 2019 | Team Udayavani |

ಮುಂಬಯಿ: ಮುಂಬಯಿ-ಗೋವಾ ಹೆದ್ದಾರಿಯಲ್ಲಿ ಗುಂಡಿಗಳಿರುವ ಬಗ್ಗೆ ಆಕ್ಷೇಪಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಶಾಸಕ ನಿತೇಶ್‌ ರಾಣೆ, ಡೆಪ್ಯುಟಿ ಎಂಜಿನಿಯರ್‌ ತಲೆಗೆ ಕೆಸರು ಸುರಿದಿದ್ದು ತೀವ್ರ ವಿವಾದಕ್ಕೀಡಾಗಿದೆ.

Advertisement

ಇತ್ತೀಚೆಗಷ್ಟೇ ಬಿಜೆಪಿ ಶಾಸಕ ಆಕಾಶ್‌ ವಿಜಯವರ್ಗೀಯ ಅಧಿಕಾರಿಯನ್ನು ಕ್ರಿಕೆಟ್‌ ಬ್ಯಾಟ್‌ನಿಂದ ಥಳಿಸಿದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಈ ಘಟನೆ ನಡೆದಿದೆ.

ರಾಣೆ ಹಾಗೂ ಕಂಕಾವಿÉ ನಗರಸಭೆ ಅಧ್ಯಕ್ಷ ಸಮೀರ್‌ ನಲವಾಡೆ ಇಬ್ಬರೂ ಸೇರಿ ಈ ಕೃತ್ಯ ಎಸಗಿದ್ದಾರೆ. ಪ್ರತಿ ದಿನ ವಾಹನ ಸವಾರರಿಗೆ ಪಕ್ಕದ ವಾಹನಗಳಿಂದ ಮಣ್ಣು ಸಿಡಿಯುತ್ತಿದೆ. ನೀವೂ ಅದೇ ಸನ್ನಿವೇಶವನ್ನು ಅನುಭವಿಸಿ ಎಂದು ಹೇಳುತ್ತಾ ಈ ಕೃತ್ಯವೆಸಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶಾಸಕರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next