Advertisement

  ಯಾರೇ ಸಿಎಂ ಆದರೂ ನಮಗೆ ತೊಂದರೆ ಇಲ್ಲ : ಎಂಟಿಬಿ ನಾಗರಾಜ್

01:05 PM Jul 27, 2021 | Team Udayavani |

ಬೆಂಗಳೂರು: ಈಗ ಯಾರೇ ಸಿಎಂ ಆದರೂ ನಮಗೆ ತೊಂದರೆ ಇಲ್ಲ. ವರಿಷ್ಠರು ಯಾರನ್ನಾದ್ರೂ ಸಿಎಂ ಮಾಡಲಿ ಹೆದರಬೇಡಿ, ಎಲ್ಲವೂ ಒಳ್ಳೆಯದಾಗಲಿದೆ ಎಂದು ಯಡಿಯೂರಪ್ಪನವರು ನುಡಿದಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದರು.

Advertisement

ಇಂದು (ಜು.27) ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ರಾಜೀನಾಮೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇವರ ನಾಯಕತ್ವ ಒಪ್ಪಿಕೊಂಡು ಬಿಜೆಪಿಗೆ ಬಂದಿದ್ದೇವೆ. ಆಗ ಸಿಎಂ ಬದಲಾವಣೆ ನಿರೀಕ್ಷೆ ಇರಲಿಲ್ಲ. ಈಗ ಮಧ್ಯದಲ್ಲಿ ಬದಲಾವಣೆ ಆಗಿದೆ ಎಂದರು.

ನೂತನ ಸಿಎಂ ಬಳಿಕ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಎಂಟಿಬಿ, ಯಾರನ್ನ ಕೈ ಬಿಡ್ತಾರೆ, ಯಾರನ್ನ ಮುನ್ನಡೆಸ್ತಾರೆ ಅನ್ನೋದು ಇನ್ನೂ ತೀರ್ಮಾನ ಮಾಡಿಲ್ಲ. ನನಗೆ ಯಾವುದೇ ಆತಂಕ ಇಲ್ಲ, ಸಚಿವರಾಗಿ ಮಾಡಿದ್ರೂ ಓಕೆ, ಮಾಡದಿದ್ರೂ ಯಾವುದೇ ಬೇಸರ ಇಲ್ಲ ಎಂದರು.

ದೇಶದಲ್ಲಿ ಮೋದಿ ಹೈಕಮಾಂಡ್, ರಾಜ್ಯದಲ್ಲಿ ಯಡಿಯೂರಪ್ಪ ಹೈಕಮಾಂಡ್ ಎಂದ ಎಂಟಿಬಿ, ಬಿಎಸ್ ವೈ ಅನೇಕ ಏಳುಬೀಳು ಕಂಡ ನಾಯಕ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next