Advertisement

ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಮಾಡಿ: ಎಂಟಿಬಿ, ವಿಶ್ವನಾಥ್, ಶಂಕರ್ ಬೇಡಿಕೆ

08:39 AM Nov 30, 2020 | keerthan |

ಬೆಂಗಳೂರು: ವಿಧಾನಮಂಡಲ ಅಧಿವೇಶಕ್ಕೆ ಮುನ್ನ ಸಂಪುಟ ವಿಸ್ತರಣೆ ಮಾಡಿ ಎಂಬ ಬೇಡಿಕೆ ಮುಂದಿಡಲು ಎಂ.ಟಿ.ಬಿ.ನಾಗರಾಜ್, ಎಚ್. ವಿಶ್ವನಾಥ್, ಆರ್. ಶಂಕರ್ ಸೇರಿ ಕಾಂಗ್ರೆಸ್ ಜೆಡಿಎಸ್ ನಿಂದ ಬಿಜೆಪಿಗೆ ಬಂದವರು ಮುಂದಾಗಿದ್ದಾರೆ.

Advertisement

ಸಂಪುಟ ವಿಸ್ತರಣೆ ಪುನಾರಚನೆ ಗೊಂದಲದ ಗೂಡಾಗಿರುವುದರಿಂದ ಮೊದಲು ನಮಗೆ ಕೊಟ್ಟ ಮಾತು ಉಳಿಸಿಕೊಳ್ಳಿ. ಸರ್ಕಾರ ಬರಲು ಕಾರಣವಾದ ನಮ್ಮ ಹಿತಸಾಕ್ತಿ ಕಾಪಾಡಿ ಎಂದು ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಗೆ ನಿರ್ಧಾರ ಮಾಡಿರುವ ಇವರು ಅಧಿವೇಶನಕ್ಕೆ ಮುನ್ನ ನಮ್ಮನ್ನು ಮಂತ್ರಿ ಮಾಡಿ ಎಂದು ಬೇಡಿಕೆ ಇಡಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಸಂಪುಟ ಪೀಕಲಾಟ: “ನಾಳೆ ಬಾ’ ಕಥೆಯಂತಾದ ಸಚಿವ ಸಂಪುಟ ಕಸರತ್ತು

ಸಂಪುಟ ಪುನಾರಚನೆ ಯಾವಾಗಲಾದರೂ ಮಾಡಿಕೊಳ್ಳಿ ಮೊದಲು ವಿಸ್ತರಣೆ ಮಾಡಿ. ನಮಗೆ ಕೊಟ್ಟ ಮಾತಿನಂತೆ ಅವಕಾಶ ಮಾಡಿಕೊಡಿ ಎಂಬ ವಾದ ಇವರದು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next