Advertisement

ಕ್ರೀಡಾ ಸಾಧಕರಿಗೆ ಪದ್ಮ ಪುರಸ್ಕಾರ

09:44 AM Jan 26, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಪ್ರಕಟಿಸಿರುವ ಪ್ರಸ್ತುತ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ದೇಶದ ಖ್ಯಾತ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಕರ್ನಾಟಕದ ಸ್ನೂಕರ್‌-ಬಿಲಿಯರ್ಡ್ಸ್‌ ಪಟು ಪಂಕಜ್‌ ಆಡ್ವಾಣಿ ಮತ್ತು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

Advertisement

ಉಳಿದಂತೆ ಪದ್ಮಶ್ರೀ ಪ್ರಶಸ್ತಿಗೆ ಖ್ಯಾತ ಟೆನಿಸಿಗ ಸೋಮ್‌ದೇವ್‌ ದೇವ್‌ ವರ್ಮನ್‌ ಅವರನ್ನು ಆರಿಸಲಾಗಿದೆ. ಪ್ಯಾರಾಲಿಂಪಿಕ್ಸ್‌ ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಈಜುಪಟು ಮುರಳಿಕಾಂತ್‌ ಪೆಟ್ಕರ್‌, ವನಿತಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು, ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ ಕೆ. ಶ್ರೀಕಾಂತ್‌ ಅವರಿಗೂ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. 

ಮುರಳಿಕಾಂತ್‌ ಪೆಟ್ಕರ್‌ ಅವರು 1972ರ ಜರ್ಮನಿ ಪ್ಯಾರಾಲಂಪಿಕ್ಸ್‌ 50 ಮೀ. ಫ್ರೀ ಸ್ಟೈಲ್‌ ಸ್ವಿಮ್ಮಿಂಗ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದರು. ಅದೇ ಪಂದ್ಯಾವಳಿಯ ಜಾವೆಲಿನ್‌ತ್ರೋ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next