Advertisement

IPL 2023: ಸಿಎಸ್ ಕೆ ಆಟಗಾರನ ವಿರುದ್ಧ ಕೋಪಗೊಂಡ ಕ್ಯಾಪ್ಟನ್ ಕೂಲ್ ಧೋನಿ

12:45 PM Apr 18, 2023 | Team Udayavani |

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ಯಾಪ್ಟನ್ ಕೂಲ್ ಎಂದೇ ಹೆಸರಾದವರು. ಯಾವುದೇ ಕ್ಷಣದಲ್ಲಿಯೂ ತಾಳ್ಮೆಯಿಂದ ವರ್ತಿಸುವ ಧೋನಿ ಅವರು ಮುಖದಲ್ಲಿಯೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಸದಾ ನಿರ್ಲಿಪ್ತರಾಗಿಯೇ ಇರುವ ಧೋನಿ ಆಟಗಾರರ ಮೇಲೆ ಕೋಪಗೊಳ್ಳುವುದು ತೀರಾ ಅಪರೂಪ.

Advertisement

ಆದರೆ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಧೋನಿ ತಾಳ್ಮೆ ಕಳೆದುಕೊಂಡಿದ್ದಾರೆ. ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮೋಯಿನ್ ಅಲಿ ವಿರುದ್ಧ ಕೋಪಗೊಂಡಿದ್ದಾರೆ.

ಇದನ್ನೂ ಓದಿ:Ileana D’Cruz: ಮದುವೆಗೂ ಮುನ್ನವೇ ಮಗುವಿನ ನಿರೀಕ್ಷೆ; ಪೋಸ್ಟ್‌ ಹಾಕಿ ಸಂತಸ ಹಂಚಿಕೊಂಡ ನಟಿ

ರನ್ ಚೇಸ್‌ ನ 18ನೇ ಓವರ್‌ನಲ್ಲಿ ವೇಯ್ನ್ ಪಾರ್ನೆಲ್ ಅವರು ಮಥೀಶ ಪತಿರಣ ಅವರ ಎಸೆತವನ್ನು ಎಕ್ಸ್‌ಟ್ರಾ-ಕವರ್ ಕಡೆಗೆ ಬಾರಿಸಿ ಸಿಂಗಲ್‌ ಗಾಗಿ ಓಡಿದರು. ಆದರೆ ನಾನ್ ಸ್ಟ್ರೈಕರ್ ನಲ್ಲಿದ್ದ ಸುಯಶ್ ಪ್ರಭುದೇಸಾಯಿ ಓಡಲೇ ಇಲ್ಲ. ಈ ವೇಳೆ ಅವರನ್ನು ರನ್ ಔಟ್ ಮಾಡುವ ಅದ್ಭುತ ಅವಕಾಶ ಮೊಯಿನ್ ಅಲಿಗೆ ಸಿಕ್ಕಿತ್ತು. ಆದರೆ ಮೊಯಿನ್ ಚೆಂಡನ್ನು ಪಡೆದು ಎಸೆಯುವಲ್ಲಿ ಉದಾಸಿನ ತೋರಿದರು. ಚೆಂಡನ್ನು ಕೀಪರ್ ಧೋನಿಗೆ ಎಸೆಯುವ ಹೊತ್ತಿಗೆ ಬ್ಯಾಟರ್ ಸುರಕ್ಷಿತವಾಗಿ ಕ್ರೀಸ್‌ ನಲ್ಲಿದ್ದರು. ಮೊಯಿನ್ ಅಲಿ ಅವರ ಈ ಪ್ರಯತ್ನಕ್ಕೆ ಧೋನಿ ಕೋಪಗೊಂಡರು.

Advertisement

ಸಿಎಸ್ ಕೆ- ಆರ್ ಸಿಬಿ ನಡುವಿನ ಹೈವೋಲ್ಟೇಜ್ ಸಮರದಲ್ಲಿ ಚೆನ್ನೈ ತಂಡವು ಎಂಟು ರನ್ ಅಂತರದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ 226 ರನ್ ಗಳಿಸಿದ್ದರೆ, ಬೆಂಗಳೂರು ತಂಡವು 218 ರನ್ ಮಾತ್ರ ಮಾಡಲು ಶಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next