Advertisement

ಪಾಂಡೆ ವಿರುದ್ಧ ಧೋನಿ ಗರಂ ಆದರೇಕೆ?!

06:45 AM Feb 23, 2018 | Team Udayavani |

ಸೆಂಚುರಿಯನ್‌: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕೂಲ್‌ ಕ್ಯಾಪ್ಟನ್‌, ಶಾಂತಮೂರ್ತಿ ಎಂದೇ ಖ್ಯಾತಿ ಪಡೆದಿದ್ದಾರೆ. ಕ್ರೀಡಾಂಗಣದ ಹೊರಗೆ ಅಥವಾ ಒಳಗೆ ಧೋನಿ ಎಂದೂ ತಾಳ್ಮೆ ಕಳೆದುಕೊಂಡವರಲ್ಲ. ಆದರೆ ಸೆಂಚುರಿಯನ್‌ನಲ್ಲಿ ನಡೆದ 2ನೇ ಟಿ20 ಪಂದ್ಯದ ವೇಳೆ ಮನೀಷ್‌ ಪಾಂಡೆ ವಿರುದ್ಧ ಧೋನಿ ಕೆಂಡಾಮಂಡಲರಾದ ಘಟನೆ ನಡೆದಿದೆ. ಇದು ಪ್ರೇಕ್ಷಕರಿಗೆ ತೀವ್ರ ಅಚ್ಚರಿ ತಂದಿದೆ.

Advertisement

ಅದು ಭಾರತದ ಸರದಿಯ ಕೊನೆಯ ಓವರ್‌ ಆಗಿತ್ತು. ಈ ವೇಳೆ ಪಾಂಡೆ ಮಿಡ್‌ ವಿಕೆಟ್‌ನತ್ತ ಬಾರಿಸಿದರು. ಒಂದು ರನ್‌ ಗಳಿಸಿ ಅತ್ತ ಮುಖ ಮಾಡಿ ನಿಂತುಬಿಟ್ಟರು. ಧೋನಿ 2 ರನ್‌ ಕದಿಯುವ ಯೋಜನೆಲ್ಲಿದ್ದರು. ಆದರೆ ಪಾಂಡೆ ಅತ್ತಮುಖ ತಿರುಗಿಸಿದ್ದು, ರನ್‌ ಓಡುವಲ್ಲಿ ಉದಾಸೀನತೆ ತೋರಿದ್ದು ಧೋನಿ ಸಿಟ್ಟಿಗೆ ಕಾರಣವಾಯಿತು.

“ಅತ್ತ ಇತ್ತ ಏನು ನೋಡುತ್ತಿದ್ದೀಯಾ? ಇತ್ತ ನೋಡು. ರನ್‌ ಕದಿಯುವತ್ತ ನಿಗಾ ಇರಲಿ’ ಎಂದು ಧೋನಿ ಅಬ್ಬರಿಸಿದರು. ಧೋನಿ ಧ್ವನಿ ಸ್ಟಂಪ್‌ ಸ್ಪೀಕರ್‌ನಲ್ಲಿ ದಾಖಲಾಗಿದೆ. ಆವೇಶದಲ್ಲಿ ಕೆಟ್ಟ ಪದವೊಂದನ್ನು ಕೂಡ ಧೋನಿ ಪ್ರಯೋಗಿಸಿದ್ದಾರೆ. ಭಾರತದ ಬ್ಯಾಟಿಂಗ್‌ ಮುಗಿದ ಕೂಡಲೇ ಪಾಂಡೆಯನ್ನು ಬಿಟ್ಟು ಧೋನಿ ಬಿರುಸಿನಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಭಾರತ ಸಂಕಷ್ಟಕ್ಕೆ ಸಿಲುಕಿದ್ದಾಗ ಧೋನಿ-ಪಾಂಡೆ ಸೇರಿಕೊಂಡು ಮುರಿಯದ 5ನೇ ವಿಕೆಟಿಗೆ 98 ರನ್‌ ಜತೆಯಾಟ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next