Advertisement

ಅಧ್ಯಕ್ಷ ಪದವಿ ಒಲ್ಲೆ ಎಂದ ರಾಹುಲ್

02:36 AM Jun 27, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ, ಹುದ್ದೆಯಲ್ಲಿ ಮುಂದುವರಿಯುವಂತೆ ಮುಖಂಡರ ಮನವಿಯನ್ನು ತಿರಸ್ಕರಿಸುತ್ತಲೇ ಇದ್ದಾರೆ. ಬುಧವಾರ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಮಿತಿಯಲ್ಲೂ ಈ ಬಗ್ಗೆ ರಾಹುಲ್ ಮನವೊಲಿಕೆ ಯತ್ನ ನಡೆಯಿತಾದರೂ ಅವರು ಸುತರಾಂ ಒಪ್ಪಲಿಲ್ಲ. ಮೂಲಗಳ ಪ್ರಕಾರ ಶಶಿ ತರೂರ್‌ ಮತ್ತು ಮನೀಶ್‌ ತಿವಾರಿಯಂಥ ನಾಯಕರು ರಾಹುಲ್ ಹುದ್ದೆಯಲ್ಲೇ ಮುಂದುವರಿಯಬೇಕು ಎಂದು ಹೇಳಿದರು. ಆದರೆ ಇದು ಈ ಬಗ್ಗೆ ಚರ್ಚೆ ನಡೆಸುವ ಸಮಯವಲ್ಲ ಎಂದು ಅವರ ಮನವಿಯನ್ನು ತಳ್ಳಿಹಾಕಿದರು ಎನ್ನಲಾಗಿದೆ. ಸಂಸದೀಯ ಪಕ್ಷದ ಸಭೆಯ ನೇತೃತ್ವವನ್ನು ಸೋನಿಯಾ ಗಾಂಧಿ ವಹಿಸಿದ್ದರು. ಮೇ 25 ರಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿ ರಾಹುಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೂಲಗಳ ಪ್ರಕಾರ ಮುಂದಿನ ವಾರ ಸಭೆ ಸೇರಲಿರುವ ಕಾಂಗ್ರೆಸ್‌ ಮುಖಂಡರು ಪಕ್ಷದ ಅಧ್ಯಕ್ಷರ ಕುರಿತು ಹಾಗೂ ಮುಂದಿನ ನಡೆ ಕುರಿತು ಚರ್ಚೆ ನಡೆಸಲಿದ್ದಾರೆ.

Advertisement

ಅಷ್ಟೇ ಅಲ್ಲ, ಎನ್‌ಎಸ್‌ಯುಐ ಕಾರ್ಯಕರ್ತರು ಕೂಡ ರಾಹುಲ್ ನಿವಾಸದ ಎದುರು ಸೇರಿ ಧರಣಿ ನಡೆಸಿ, ರಾಹುಲ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಆಗ್ರಹಿಸಿದರು. ನೂರಾರು ಕಾರ್ಯತರ್ಕರು ಫ‌ಲಕಗಳನ್ನು ಹಿಡಿದು ಘೋಷಣೆ ಕೂಗಿದರು. ರಾಹುಲ್ ಗಾಂಧಿ ಭೇಟಿಗೂ ಎನ್‌ಎಸ್‌ಯುಐ ಕಾರ್ಯಕರ್ತರು ಯತ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next