Advertisement
ಹೀಗಾಗಿ ರಾಜ್ಯಸಭೆಯ 20 ಮತ್ತು ಲೋಕಸಭೆಯ ನಾಲ್ವರು ಸದಸ್ಯರನ್ನು ಅಮಾನತುಗೊಳಿಸಿದ್ದರ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಪ್ರತಿಭಟನೆ ಬಿರುಸುಗೊಳಿಸಿವೆ.
Related Articles
Advertisement
ಸಭಾಪತಿ ಜತೆಗೆ ಸಭೆ: ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಜತೆಗೆ ವಿಪಕ್ಷಗಳ ನಾಯಕರು ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಪಕ್ಷಗಳ ನಾಯಕರು ತತ್ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ರದ್ದು ಮಾಡಬೇಕು ಎಂದು ಕೋರಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ನಾಯ್ಡು, ಸಂಸದರು ಕ್ಷಮೆ ಕೋರಿದ ತತ್ಕ್ಷಣ ನಿರ್ಧಾರ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ರಾಣಿ ಅಥವಾ ಯುವರಾಜ; ಯಾರೂ ದೊಡ್ಡವರಲ್ಲ: ವಿಪಕ್ಷ ನಾಯಕ ಖರ್ಗೆ ಮಾಡಿರುವ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿರಸ್ಕರಿಸಿದ್ದಾರೆ. “ರಾಣಿ ಅಥವಾ ಯುವರಾಜ ಯಾರೇ ಆಗಲಿ ಪ್ರಜಾಪ್ರಭುತ್ವ ದಲ್ಲಿ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಿಂದ ಕಾಂಗ್ರೆಸ್ ಅತ್ಯಂತ ಎತ್ತ ರದಲ್ಲಿದೆ ಎಂಬ ಭಾವನೆಯನ್ನು ಹೊಂದಿದೆ. ಅವರು ಕಾನೂನು ಮತ್ತು ತನಿಖೆ ಎದುರಿಸಲು ಹಿಂದೇಟು ಹಾಕುತ್ತಿರುವುದೇಕೆ’ ಎಂದು ಪ್ರಶ್ನೆ ಮಾಡಿದ್ದಾರೆ.
7.22 ಲಕ್ಷ ಜನರಿಗೆ ಉದ್ಯೋಗ: 2014ರಿಂದ 2022ರವರೆಗೆ ದೇಶದಲ್ಲಿ ಕೇಂದ್ರ ಸರಕಾರ 7.22 ಲಕ್ಷ ಜನರಿಗೆ ತನ್ನ ಅಧೀನದ ಇಲಾಖೆಗಳಲ್ಲಿ ಉದ್ಯೋಗ ಕೊಟ್ಟಿದೆ ಎಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ. ನಾನಾ ಇಲಾಖೆಗಳಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿದ್ದು ಒಟ್ಟು 22.05 ಕೋಟಿ ಜನರು ಅರ್ಜಿಯನ್ನು ಸಲ್ಲಿಸಿದ್ದರು. ಅವರಲ್ಲಿ 7.22 ಲಕ್ಷ ಜನರು ಉದ್ಯೋಗಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಆಪ್ ಸಂಸದ ಸಂಜಯ್ ಅಮಾನತುಬುಧವಾರ ಬೆಳಗ್ಗೆ ಆರಂಭಗೊಂಡ ರಾಜ್ಯಸಭಾ ಕಲಾಪಗಳಿಗೆ ಪುನಃ ವಿಪಕ್ಷಗಳ ಅಡಚಣೆ ಎದುರಾಯಿತು. ಬೆಲೆಯೇರಿಕೆ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತಿದ್ದ ವಿಪಕ್ಷಗಳ ಸಂಸದರು, ಸರಕಾರದ ಯಾವುದೇ ಮಸೂದೆಗಳ ಮಂಡನೆಗೆ ಅವಕಾಶ ಕೊಡಲಿಲ್ಲ. ಈ ಸಂದರ್ಭದಲ್ಲಿ ಗುಜರಾತ್ನಲ್ಲಿ ನಕಲಿ ಮದ್ಯ ದುರಂತ ಸಂಭವಿಸಿರುವುದನ್ನು ತೀವ್ರವಾಗಿ ಖಂಡಿಸಿದ ಆಮ್ ಆದ್ಮಿ ಪಾರ್ಟಿಯ (ಆಪ್) ಸಂಸದ ಸಂಜಯ್ ಸಿಂಗ್, ನಕಲಿ ಮದ್ಯ ನಿಯಂತ್ರಣಕ್ಕೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸದನಕ್ಕೆ ವಿವರಿಸಬೇಕು ಎಂದು ಪಟ್ಟು ಹಿಡಿದರು. ಆದರೆ ತೀವ್ರವಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಈ ಬಾರಿಯ ಅಧಿವೇಶನದ ಉಳಿದ ಕಲಾಪಗಳಿಂದ ಅಮಾನತುಗೊಳಿಸಲಾಯಿತು. ಮತ್ತೊಂದೆಡೆ, ವಿಪಕ್ಷಗಳ ತೀವ್ರ ಗದ್ದಲ ದಿಂದಾಗಿ ಬೆಳಗ್ಗೆಯ ಕಲಾಪವನ್ನು 12 ಗಂಟೆ ತನಕ ಮೂಂದೂಡಲಾಯಿತು. ಉಪ ಸ್ಪೀಕರ್ ಹರಿವಂಶ್ ಅವರು 256ನೇ ವಿಧಿಯ ಪ್ರಕಾರ, ಸಂಜಯ್ ಅವರ ಅಮಾನತು ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.