Advertisement

ಹಲ್ಲೆ ನಡೆಸಿ ಪಾದ ನೆಕ್ಕುವಂತೆ ಬಲವಂತ: ಗ್ವಾಲಿಯರ್‌ನಲ್ಲಿ ಇಬ್ಬರ ಬಂಧನ

09:49 PM Jul 08, 2023 | Team Udayavani |

ಗ್ವಾಲಿಯರ್‌/ಭೋಪಾಲ್‌: ಮೂತ್ರ ವಿಸರ್ಜನೆ ಪ್ರಕರಣ ವಿವಾದವೆಬ್ಬಿಸಿದ ಬೆನ್ನಲ್ಲೇ ವ್ಯಕ್ತಿಯೊಬ್ಬನ ಪಾದ ನೆಕ್ಕುವಂತೆ ಬಲವಂತ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದೆ.

Advertisement

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೆ ಒಳಗಾದ ವ್ಯಕ್ತಿಗಳು ಮತ್ತು ಸಂತ್ರಸ್ತನು ಗ್ವಾಲಿಯರ್‌ ಜಿಲ್ಲೆಯ ದಬ್ರಾ ಪಟ್ಟಣಕ್ಕೆ ಸೇರಿದವರಾಗಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿರುವ ಪ್ರಕಾರ, ಬಂಧಿತ ವ್ಯಕ್ತಿ ಮತ್ತೂಬ್ಬನಿಗೆ ಪದೇ ಪದೆ ಥಳಿಸುತ್ತಿದ್ದಾನೆ. ಹೊಡೆತ ತಿಂದ ವ್ಯಕ್ತಿ ಪಾದ ನೆಕ್ಕುವ ದೃಶ್ಯಗಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಕ್ಷಮಿಸಿ, ಬಿಡುಗಡೆ ಮಾಡಿ:
ಮತ್ತೂಂದೆಡೆ, ಸಿಧಿ ಜಿಲ್ಲೆಯಲ್ಲಿ ದೇಶಮತ್‌ ರಾವತ್‌ ಎಂಬಾತನ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪ್ರವೀಣ್‌ ಶುಕ್ಲಾನನ್ನು ಬಿಡುಗಡೆ ಮಾಡುವಂತೆ ಕೋರಿಕೆ ಸಲ್ಲಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ದೇಶಮತ್‌ ಅವರೇ ಈ ಮನವಿ ಮಾಡಿದ್ದಾನೆ. ಘಟನೆ ಆದದ್ದು ಆಗಿ ಹೋಯಿತು. ಶುಕ್ಲ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾನೆ. ಹಾಗಾಗಿ ಅವರನ್ನು ಬಿಟ್ಟುಬಿಡಿ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next