Advertisement

ರೂಪಶ್ರೀ ಮನೆಗೆ ಸಂಸದ ಉಣ್ಣಿತ್ತಾನ್‌ ಭೇಟಿ

09:59 PM Jan 27, 2020 | Team Udayavani |

ಮಂಜೇಶ್ವರ: ಸಹಶಿಕ್ಷಕನಿಂದಲೇ ದಾರುಣವಾಗಿ ಕೊಲೆಗೀಡಾದ ಮೀಯಪದವು ವಿದ್ಯಾವರ್ಧಕ ಶಾಲೆಯ ಅಧ್ಯಾಪಕಿ ರೂಪಶ್ರಿ ಟೀಚರ್‌ ಮನೆಗೆ ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಭೇಟಿ ನೀಡಿದರು.

Advertisement

ಸಂಸದರ ಜತೆಗೆ ಕಾಸರಗೋಡು ಜನಪ್ರತಿನಿಧಿಗಳಾದ ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್‌ ವರ್ಕಾಡಿ, ಮೀಂಜ ಪಂಚಾ ಯತ್‌ ಅಧ್ಯಕ್ಷೆ ಶಂಷಾದ್‌ ಶುಕೂರ್‌, ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಕುಂಞಿ, ಯುಡಿಎಫ್‌ ನೇತಾರರಾದ ರಾಘವ ಚೇರಾಲ್‌, ಶೆಕೂರ್‌ ತಲೇಕಳ, ಸಿದ್ದಿಕ್‌ ಮೀಯಪದವು, ಪ್ರವೀಣ್‌ ಡಿ’ಸೋಜಾ, ರಿಯಾಝ್ ಚಿಗುರುಪಾದೆ, ಹನೀಫ್‌ ಚಿಗುರುಪಾದೆ ಮುಂತಾದವರು ಉಪಸ್ಥಿತರಿದ್ದರು. ಕೊಲೆಗೀಡಾದ ರೂಪಶ್ರಿಯವರ ಪತಿ, ಮಕ್ಕಳು, ತಾಯಿ ಹಾಗೂ ಕುಟುಂಬಸ್ಥರನ್ನು ಸಂತೈಸಿದ ಸಂಸದ ರಾಜ್‌ ಮೋಹನ್‌ ಉಣ್ಣಿತ್ತಾನ್‌ ಕೊಲೆಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಒತ್ತಡ ಹೇರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next