Advertisement

ಮಂಡ್ಯದ ಜನ ಮೋಸಕ್ಕೆ ಮರುಳಾಗದೇ ಪ್ರೀತಿಗೆ ಮರುಳಾದರು

10:00 AM May 25, 2019 | Vishnu Das |

ಬೆಂಗಳೂರು: ಮಂಡ್ಯದ ಜನರು ಮೋಸಕ್ಕೆ ಮರುಳಾಗದೆ ಪ್ರೀತಿಗೆಮರುಳಾದರು. ಹಣ ಚೆಲ್ಲಿ ಚುನಾವಣೆ ಮಾಡಿದರೂ ಜನರು ನಿರ್ಲಕ್ಷಿಸಿದರು ಎಂದು ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‌ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಆ ಬಳಿಕ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಸುಮಲತಾ, ನೆಗೆಟಿವ್‌ ರಾಜಕಾರಣಕ್ಕೆ ಮಂಡ್ಯದ ಜನರು ತಕ್ಕ ಪಾಠಕಲಿಸಿದ್ದಾರೆ. ನನ್ನನ್ನು ಅವಮಾನಿಸಿರುವವರಿಗೆ ಫ‌ಲಿತಾಂಶ ಆಶ್ಚರ್ಯ ತಂದಿದೆ
ಇದು ಮಂಡ್ಯದ ಸ್ವಾಭಿಮಾನದ ಗೆಲುವು ಎಂದರು.

ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಕಾಂಗ್ರೆಸ್‌ ನಾಯಕರಲ್ಲಿ ಕೇಳಿದ್ದೆ, ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಟಿಕೆಟ್‌ ನೀಡಿದ್ದರೆ ಅನಾಯಾಸವಾಗಿ ಗೆಲುವು ಸಾಧಿಸುತ್ತಿದ್ದೆ ಎಂದರು.

ನನ್ನ ಮೊದಲ ಗುರಿ ಅಂಬರೀಶ್‌ ಅವರ ಕನಸನ್ನು ನನಸು ಮಾಡುವುದು. ಅವರ ಹಾದಿಯಲ್ಲೇ ಸಾಗುತ್ತೇನೆಎಂದರು.

ಜನರ ಪ್ರೀತಿಯಲ್ಲೇ ನಾನು ಅಂಬರೀಶ್‌ ಅವರನ್ನು ಕಾಣುತ್ತೇನೆ.ನಾನು ಮಂಡ್ಯದ ಜನರ ಅಭಿಪ್ರಾಯ ಕೇಳಿ ಸ್ಪರ್ಧಿಸಿದ್ದೆ. ಮಂಡ್ಯದ ಜನರ ಅಭಿಪ್ರಾಯ ಕೇಳಿಯೇ ಮುಂದುವರಿಯುತ್ತೇನೆ ಎಂದರು.

Advertisement

ಗೆಲುವಿನ ಬಳಿಕ ಕಾಂಗ್ರೆಸ್‌ , ಬಿಜೆಪಿ ನಾಯಕರು ಕರೆ ಮಾಡಿ ಶುಭ ಕೋರಿದ್ದಾರೆ ಎಂದರು.

ಸಮಾಧಿಗೆ ಪುಷ್ಟ ನಮನ ಸಲ್ಲಿಸುವ ವೇಳೆ ಸುಮಲತಾ ಭಾವುಕರಾದರು.

Advertisement

Udayavani is now on Telegram. Click here to join our channel and stay updated with the latest news.

Next