Advertisement

Adani: ಸಂಸದೆ ಮಹುವಾಗೆ ಡಬಲ್‌ ಸಂಕಟ

10:43 PM Oct 21, 2023 | Team Udayavani |

ಕೋಲ್ಕತಾ/ಹೊಸದಿಲ್ಲಿ: ಅದಾನಿ ಗ್ರೂಪ್‌ ವಿರುದ್ಧ ಸಂಸತ್‌ ಪ್ರಶ್ನೆ ಕೇಳಲು ಲಂಚ ಪಡೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಲೋಕಪಾಲ ತನಿಖೆ ಆಗಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಒತ್ತಾಯಿಸಿದ್ದಾರೆ. ಒಟ್ಟು 2 ಕೋಟಿ ರೂ. ಲಂಚವನ್ನೂ ಪಡೆದುಕೊಂಡಿದ್ದಾರೆ ಎಂದೂ ದೂರಿದ್ದಾರೆ.

Advertisement

ಈ ಬಗ್ಗೆ ಅವರು ಲೋಕಪಾಲಕ್ಕೆ ಪತ್ರವನ್ನೂ ಬರೆದು ಒತ್ತಾಯಿಸಿದ್ದಾರೆ. ಸುಪ್ರೀಂಕೋರ್ಟ್‌ ವಕೀಲ ಜೈ ಅನಂತ್‌ ದೇಹಾದ್ರಾಯ್‌ ಅವರಿಗೆ ಸಂಸದೆ ಮೊಯಿತ್ರಾ ಪರ ವಕೀಲರು ಸಂಧಾನಕ್ಕಾಗಿ ಬಂದಿದ್ದರು ಎಂಬ ಬಗ್ಗೆ ಬರೆದಿರುವ ಪತ್ರ ತಮ್ಮ ಬಳಿ ಇದೆ ಎಂದೂ ದುಬೆ ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಂಸತ್‌ನಲ್ಲಿ ಪ್ರಶ್ನೆ ಕೇಳುವ ನಿಟ್ಟಿನಲ್ಲಿ ಉದ್ಯಮಿ ದರ್ಶನ್‌ ಹೀರಾನಂದಾನಿ ಆವರಿಂದ ಲಂಚ ಪಡೆದುಕೊಂಡಿದ್ದಾರೆ ಸೇರಿದಂತೆ ಹಲವು ದಾಖಲೆಗಳು ತನ್ನ ಬಳಿ ಇವೆ. ಹೀಗಾಗಿ, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ದೂರ ಸರಿದ ಟಿಎಂಸಿ: ಪ್ರಶ್ನೆ ಕೇಳಲು ಲಂಚ ಪ್ರಕರಣ ಶನಿವಾರ ಹೊಸ ಮಜಲನ್ನು ಪ್ರವೇಶಿಸುತ್ತಲೇ ಸಂಸದೆ ಮಹುವಾ ಮೊಯಿತ್ರಾ ಅವರ ವಿವಾದದಿಂದ ದೂರ ಸರಿಯಲು ತೃಣಮೂಲ ಕಾಂಗ್ರೆಸ್‌ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪಕ್ಷ ಹೇಳುವುದೇನೂ ಇಲ್ಲ. ವಿವಾದಕ್ಕೆ ಒಳಗಾದವರೇ ಈ ಬಗ್ಗೆ ಮಾತನಾಡವುದು ಸೂಕ್ತ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕುನಾಲ್‌ ಘೋಷ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next