Advertisement

‘ಟಾಯ್ಲೆಟ್, ಚರಂಡಿ ಶುಚಿ ಮಾಡಲು ಎಂಪಿ ಆಗಿಲ್ಲ’

10:59 AM Jul 22, 2019 | Team Udayavani |

ಸಿಹೋರ್‌: ಮಧ್ಯಪ್ರದೇಶದ ಭೋಪಾಲದಿಂದ ಲೋಕಸಭೆಗೆ ಆಯ್ಕೆಯಾಗಿರುವ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ‘ಶೌಚಾಲಯ, ಚರಂಡಿಗಳನ್ನು ತೊಳೆದು, ಶುಚಿ ಮಾಡಲು ಸಂಸತ್‌ ಸದಸ್ಯೆಯಾಗಿಲ್ಲ’ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಸಿಹೋರ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.’ಸಂಸತ್‌ ಸದಸ್ಯೆಯಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ಆದರೆ ಶೌಚಾಲಯಗಳನ್ನು ತೊಳೆಯಲು, ಚರಂಡಿಗಳನ್ನು ಶುಚಿಗೊಳಿಸಲು ಜನರಿಂದ ಆಯ್ಕೆಯಾಗಿಲ್ಲ’ ಎಂದು ಹೇಳಿದ್ದಾರೆ. ಅವರು ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಸಿಹೋರ್‌ನ ಸ್ಥಳೀಯರೂ ಶುಚಿತ್ವದ ಬಗ್ಗೆ ದೂರನ್ನೂ ಬಿಜೆಪಿ ನಾಯಕಿಗೆ ನೀಡಿದ್ದರು.

Advertisement

ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ವಿರುದ್ಧ ಭಾರೀ ಅಂತರದಿಂದ ಜಯ ಸಾಧಿಸಿರುವ ಅವರು, ಲೋಕಸಭೆ ಚುನಾವಣೆ ವೇಳೆ ಪ್ರಜ್ಞಾ ಸಿಂಗ್‌ ಮುಂಬಯಿ ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ದಿ| ಹೇಮಂತ್‌ ಕರ್ಕರೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರಬಲ ಆಕ್ಷೇಪ ವ್ಯಕ್ತವಾದ ಬಳಿಕ ಅವರು ಕ್ಷಮೆ ಯಾಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next