Advertisement

PM Modi ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಂಸದ ಡಿ.ಕೆ. ಸುರೇಶ್

08:39 PM Dec 01, 2023 | Team Udayavani |

ರಾಮನಗರ: ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶುಕ್ರವಾರ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

Advertisement

ಮಾಗಡಿಯಲ್ಲಿ ಮಾತನಾಡಿ, ”ನೀನು‌ ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದೀಯ ಹೇಳು. ನೀನು ಟ್ಯಾಕ್ಸ್ ಕಟ್ಟೋದಿಲ್ಲ.ಕಟ್ಟದೇ ಇದೋರಿಗೆಲ್ಲ ಯಾಕೆ ಫ್ರೀ ಕೋಡುತ್ತೀಯಾ ಅಂತ ಕೇಳುತ್ತಾನೆ” ಎಂದು ಕಿಡಿ ಕಾರಿದ್ದಾರೆ.

ಮೋದಿ ಯಾರತ್ತಿರನೂ ಮಾತನಾಡಲ್ಲ‌.ಅವನು ಹೇಳಿದನ್ನ ನೀನು ಕೇಳಿಕೊಳ್ಳಬೇಕು.ಮೋದಿ‌ ಸರಿ ಇಲ್ಲ‌ ಅಂದರೆ ನಾನು‌ ಏನು‌ ಮೋಡೋಕಾಗತ್ತೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

”ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಬೇಡಿಕೆಯನ್ನು ಇಡಬೇಕು.ಎಲ್ಲರಿಗೂ ಆಸೆ ಇದೆ, ಏನು ಕೊಟ್ಟರೂ ಸಾಲೋದಿಲ್ಲ. ಸರ್ಕಾರಿ ನೌಕರರು ಸಮಾಧಾನವಾಗಿದ್ದಾರಾ?.ಪಂಚಾಯತ್ ಸದಸ್ಯರು, ಶಾಸಕರು ಸಾಮಾಧಾನವಾಗಿಲ್ಲ. ಬೆಳಗ್ಗೆ ಎದ್ದು ಯಾರು ದುಡಿಮೆ ಮಾಡುತ್ತಾನೋ ಅವನೇ ಸಮಾಧಾನವಾಗಿರೋದು.ಇವತ್ತಿನ‌ ಪರಿಸ್ಥಿತಿ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next