Advertisement

Ullal ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಬ್ರಿಜೇಶ್‌ ಚೌಟ ಭೇಟಿ

01:27 AM Jul 01, 2024 | Team Udayavani |

ಉಳ್ಳಾಲ: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ರವಿವಾರ ಉಳ್ಳಾಲ ಪ್ರದೇಶದ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು.

Advertisement

ಮದಿನ ನಗರದಲ್ಲಿ ದುರಂತಕ್ಕೀಡಾದ ಯಾಸಿರ್‌ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಬಳಿಕ ಉಳ್ಳಾಲ, ಸೋಮೇಶ್ವರದ ಕಡಲ್ಕೊರೆತ ಪ್ರದೇಶಗಳಾದ ಉಳ್ಳಾಲ ಮೊಗವೀರಪಟ್ಣ, ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಗೆ ಭೇಟಿ ನೀಡಿ ದರು. ಸಮುದ್ರ ತೀರದ ಜನರಲ್ಲಿ ಎಚ್ಚರದಿಂದಿ ರುವಂತೆ ಮನವಿ ಮಾಡಿದರು.

ಅಪಾಯ ದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಸಾಧ್ಯವಿರುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಉಳ್ಳಾಲ ತಾಲೂಕು ತಹಶಿಲ್ದಾರ್‌ ಪ್ರದೀಪ್‌ ಕುರ್ಡೇಕರ್, ಪೋರ್ಟ್‌ ಎಂಜಿನಿಯರ್‌ ಪ್ರವೀಣ್‌, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕ ಪ್ರಮೋದ್‌, ಬಿಜೆಪಿ ಜಿಲ್ಲಾಧ್ಯಕ್ಷ‌ ಸತೀಶ್‌ ಕುಂಪಲ, ಮೈಸೂರು ಎಲೆಕ್ಟ್ರಿಕಲ್‌ ಪ್ರೈ . ಲಿ. ನ ಮಾಜಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಯಶವಂತ ಅಮೀನ್‌ ಮತ್ತಿತರರು ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next