Advertisement

ಮ.ಪ್ರ. ಶೇ.70ರಷ್ಟು ಉದ್ಯೋಗ ಸ್ಥಳೀಯರಿಗೇ ಮೀಸಲು

12:30 AM Feb 06, 2019 | Team Udayavani |

ಭೋಪಾಲ: ಮಧ್ಯಪ್ರದೇಶದಲ್ಲಿರುವ ಎಲ್ಲ ಉದ್ದಿಮೆಗಳಲ್ಲಿ ಶೇ.70ರಷ್ಟು ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಕಮಲ್‌ನಾಥ್‌ “ಚುನಾವಣೆ ವೇಳೆ ಬಿಡುಗಡೆ ಮಾಡಲಾಗಿರುವ ವಚನ ಪತ್ರದಂತೆ ಮಧ್ಯ ಪ್ರದೇಶದಾದ್ಯಂತ ಎಲ್ಲ ರೀತಿಯ ಕೈಗಾರಿಕೆಗಳಲ್ಲಿ ಶೇ. 70ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕು ಎಂದು ಆದೇಶಿಸಲಾಗಿದೆ’ ಎಂದಿದ್ದಾರೆ. ಉತ್ತರಪ್ರದೇಶ, ಬಿಹಾರದಿಂದ ತೀವ್ರ ವಿರೋಧದ ನಡುವೆಯೂ ನಿರ್ಧಾರ ಘೋಷಿಸಲಾಗಿದೆ. 

Advertisement

ಬಿಹಾರ ಮತ್ತು ಉ.ಪ್ರದೇಶದ ಕಾರ್ಮಿಕರು ನಮ್ಮ ರಾಜ್ಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕಾರಣ, ಸ್ಥಳೀಯರಿಗೆ ಉದ್ಯೋಗ ದೊರಕುತ್ತಿಲ್ಲ ಎಂದು ಹೇಳಿ ಈ ಹಿಂದೆಯೇ ಕಮಲ್‌ನಾಥ್‌ ವಿವಾದ  ಸೃಷ್ಟಿಸಿದ್ದರು. ಈಗ ವ್ಯಾಪಕ ವಿರೋಧದ ನಡುವೆಯೇ ಈ ನಿಯಮ ಜಾರಿಗೆ ತಂದಿದ್ದಾರೆ. ಹೊಸ ಕೈಗಾರಿಕಾ ನೀತಿಯ ಅನ್ವಯ ಈ ನಿಯಮ ಪ್ರಕಟಿಸಲಾಗಿದೆ. ಮಧ್ಯಪ್ರದೇಶ ಸರಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ಉದ್ದಿಮೆಗಳು ಈ ನಿಯಮವನ್ನು ಪಾಲಿಸಬೇಕು. ಈ ಬಗ್ಗೆ ಚರ್ಚೆ ನಡೆಸಲು ಫೆ. 19ರಂದು ಸಿಎಂ ಕಮಲ್‌ನಾಥ್‌ ಉದ್ಯಮ ಕ್ಷೇತ್ರಗಳ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next